ADVERTISEMENT

ಕಾಂಗ್ರೆಸ್‌ಗೆ ಖೇಣಿ ಸೇರ್ಪಡೆಯಿಂದ ಸೀದಾ ರೂಪೈಯ್ಯ ಆರೋಪ ಸಾಬೀತು:ಜಾವಡೇಕರ್‌ ; ಮೋದಿ ಕಣ್ಗಾವಲಲ್ಲಿ ಚೋಟಾಮೋದಿ ದೇಶಬಿಟ್ಟ : ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 16:20 IST
Last Updated 6 ಮಾರ್ಚ್ 2018, 16:20 IST

ಬೆಂಗಳೂರು: ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಇಂದು ಸಹ ಟ್ವಿಟರ್‌ನಲ್ಲಿ ಆರೋಪ–ಪ್ರತ್ಯಾರೋಪ ನಡೆಯಿತು.

ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಹೊತ್ತಿರುವ ಪ್ರಕಾಶ್‌ ಜಾವಡೇಕರ್‌, ‘ನೈಸ್ ಹಗರಣದ ರೂವಾರಿ ಅಶೋಕ್ ಖೇಣಿ ವಿರುದ್ಧ ತನಿಖೆ ನಡೆಸಿ ಜೈಲಿಗೆ ಅಟ್ಟಬೇಕಿದ್ದ ಸಿದ್ದರಾಮಯ್ಯನವರು, ಖೇಣಿಯನ್ನು ಅಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಧಾನಿ ಹೇಳಿದಂತೆ ಅವರದು 'ಸೀದಾ ರೂಪೈಯ್ಯ' ಸರ್ಕಾರ ಎಂಬುದು ಸಾಬೀತಾಗಿದೆ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT