ADVERTISEMENT

ಕಾಡಿನ ಮಧ್ಯೆ ಹೆಣ್ಣಾನೆ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಸನಿಹದ ಕರಕಲಜಡ್ಡಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿರುವ ಹೆಣ್ಣಾನೆಯ ಕಳೇಬರ
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಸನಿಹದ ಕರಕಲಜಡ್ಡಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿರುವ ಹೆಣ್ಣಾನೆಯ ಕಳೇಬರ   

ಮುಂಡಗೋಡ (ಉತ್ತರ ಕನ್ನಡ): ಮುಂಡಗೋಡ–ಶಿರಸಿ ಗಡಿಭಾಗದ ಕರಕಲಜಡ್ಡಿ ಅರಣ್ಯಪ್ರದೇಶದಲ್ಲಿ, ಹೆಣ್ಣಾನೆಯೊಂದರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಆನೆಯು ವಾರದ ಹಿಂದೆಯೇ ಅಸುನೀಗಿರಬಹುದು ಎಂದು ಅಂದಾಜಿಸಲಾಗಿದೆ. ಅದರ ಕಳೇಬರ ಇದ್ದ ಜಾಗದಿಂದ ತುಸು ದೂರದಲ್ಲಿ ಹೈಟೆನ್ಶನ್‌ ವಿದ್ಯುತ್‌ ಮಾರ್ಗ ಹಾದು ಹೋಗಿದೆ. ತಂತಿಗೆ ತಾಗಿರುವ ಗಿಡ–ಮರಗಳನ್ನು ಸ್ಪರ್ಶಿಸಿ, ವಿದ್ಯುತ್‌ ಪ್ರವಹಿಸಿ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

‘ಅಂದಾಜು 20ವರ್ಷದ ಹೆಣ್ಣಾನೆಯ ಮೈಮೇಲೆ ಮೇಲೆ ಗಾಯದ ಗುರುತುಗಳಿವೆ. ನಿತ್ರಾಣಗೊಂಡ ಅದು ಕೆಲ ದಿನಗಳ ಹಿಂದೆ ಮೃತಪಟ್ಟಿರಬಹುದು. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿಯಲಿದೆ.’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್‌.ಶಶಿಧರ ತಿಳಿಸಿದರು.

ADVERTISEMENT

‘ವಿದ್ಯುತ್‌ ಮಾರ್ಗದ ಕೆಳಗಿನ ಗಿಡ
ಮರಗಳು ತಂತಿಗೆ ತಾಗುವಂತಿವೆ. ಇದನ್ನು ದಾಟುವಾಗ ಆನೆಯ ದೇಹದಲ್ಲಿ ವಿದ್ಯುತ್ ಪ್ರವಹಿಸಿರಬಹುದು. ಇದಕ್ಕೆ ಸಾಕ್ಷಿಯಾಗಿ, ಆನೆಯ ಹೊಟ್ಟೆಯ ಕೆಳಭಾಗ ಸುಟ್ಟಂತೆ ಕಾಣುತ್ತದೆ.’ ಎಂದು ಸ್ಥಳೀಯ ದೇವೇಂದ್ರ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.