ಪುತ್ತೂರು: ಇಲ್ಲಿನ ಪರ್ಲಡ್ಕದ ಬಾಲವನದಲ್ಲಿರುವ ಹಿರಿಯ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಪುನಶ್ಚೇತನಗೊಂಡ ಮನೆಯ ಲೋಕಾರ್ಪಣೆ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಕಾರಂತರ ಜನ್ಮದಿನವಾದ ಮಂಗಳವಾರ ನಡೆಯಲಿದೆ.
ಹಿರಿಯ ಸಾಹಿತಿ ವೈದೇಹಿ ಅವರಿಗೆ ಈ ಬಾರಿಯ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2010ರಿಂದ ಈ ಪ್ರಶಸ್ತಿ ಜತೆಗೆ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಕಾರಂತರ ಮನೆಯನ್ನು ಇಂಟ್ಯಾಕ್ ಸಂಸ್ಥೆ ಪುನಶ್ಚೇತನಗೊಳಿಸಿದ್ದು, ಕಾರಂತರ ವಸ್ತುಸಂಗ್ರಹಾಲವನ್ನೂ ಪುನಶ್ಚೇತನಗೊಳಿಸಲಾಗಿದೆ ಎಂದು ಬಾಲವನ ಸಮಿತಿಯ ಅಧ್ಯಕ್ಷರೂ ಆದ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.