ADVERTISEMENT

ಕುಶಾಲನಗರ ಬಳಿ ಅರಣ್ಯಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST
ಹೇರೂರು ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಂಕಿ ಹೊತ್ತಿ ಉರಿದ ದೃಶ್ಯ
ಹೇರೂರು ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಂಕಿ ಹೊತ್ತಿ ಉರಿದ ದೃಶ್ಯ   

ಕುಶಾಲನಗರ: ಸಮೀಪದ ಹಾರಂಗಿ ಹಿನ್ನೀರು ವ್ಯಾಪ್ತಿಯಲ್ಲಿರುವ ಹೆರೂರು ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಂಕಿ ಕಾಣಿಸಿ­ಕೊಂಡಿದ್ದು, ಅಪಾರ ಪ್ರಮಾ­ಣದ ಅರಣ್ಯ ಹೊತ್ತಿಉರಿದಿದೆ. ಕಿಡಿಗೇಡಿಗಳು ಬೆಂಕಿ ಹಾಕಿರ­ಬಹು­ದೆಂದು ವಲಯ ಅರಣ್ಯಾಧಿಕಾರಿ ಎಂ.­ಎಂ.­ ಅಚ್ಚಪ್ಪ ಶಂಕೆ ವ್ಯಕ್ತ­ಪಡಿಸಿ­ದ್ದಾರೆ.

ಮಧ್ಯಾಹ್ನದ ವೇಳೆ ಬೆಂಕಿ ಕಾಣಸಿಕೊಂಡಿದೆ.  ಬೆಂಕಿ ನಂದಿ­­ಸಲು ಅಗ್ನಿಶಾಮಕ ದಳ ಮತ್ತು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದರು. ಗ್ರಾಮ ಅರಣ್ಯ ಸಮಿತಿ ಸದಸ್ಯರು ಮತ್ತು ಗ್ರಾಮ­ಸ್ಥರು ಸೊಪ್ಪಿನ ಗಿಡ­ಗ­ಳಿಂದ ಬೆಂಕಿ ನಂದಿ­ಸಲು ಮುಂದಾದರು. ಸಂಜೆವರೆಗೂ ನಿರಂತರವಾಗಿ ಪ್ರಯ­ತ್ನಿಸಿದ್ದರಿಂದ ಬೆಂಕಿ ಸ್ವಲ್ಪ ಕಡಿಮೆ­ಯಾಗಿದೆ ಎಂದು ಅಚ್ಚಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.