ADVERTISEMENT

ಕೃತಕ ಉಸಿರಾಟ ಸಾಧನದಿಂದ ಅಂಬರೀಷ್‌ ಮುಕ್ತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಶ್ವಾಸಕೋಶದ ಸೋಂಕಿ­ನಿಂದಾಗಿ ಅನಾರೋಗ್ಯಕ್ಕೆ ಒಳಗಾದ ನಟ, ಸಚಿವ ಅಂಬರೀಷ್‌ ಅವರ ಆರೋಗ್ಯ ಸ್ಥಿತಿಯಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದ್ದು, ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ಸಾಧನವನ್ನು ತೆಗೆಯಲಾಗಿದೆ.

ಎರಡು ವಾರಗಳ ಹಿಂದೆ ಕೃತಕ ಉಸಿರಾಟ ಸಾಧನವನ್ನು ಅಳವಡಿ­ಸ­ಲಾ­­ಗಿತ್ತು. ಅಂಬರೀಷ್‌ ಸಹಜ ಉಸಿ­ರಾಟ ಸ್ಥಿತಿಗೆ ಮರಳಿದ್ದು, ಚಿಕಿತ್ಸೆ ನೀಡು­ತ್ತಿ­ರುವ ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯ ವೈದ್ಯರು ಸಾಧನವನ್ನು ತೆಗೆದಿದ್ದಾರೆ.

ಈ ಬಗ್ಗೆ ಗುರುವಾರ ನಡೆದ ಪತ್ರಿಕಾಗೋಷ್ಠಿ­ಯಲ್ಲಿ ಮಾಹಿತಿ ನೀಡಿದ ವಿಕ್ರಂ ಆಸ್ಪ­ತ್ರೆಯ ಶ್ವಾಸ­ಕೋಶ ತಜ್ಞ ಡಾ.ಕೆ.­ಎಸ್‌.­ಸತೀಶ್‌, ‘ಅಂಬರೀಷ್‌ ಅವರ ಆರೋ­ಗ್ಯದ ಬಗ್ಗೆ ಸತತವಾಗಿ ಸಿಂಗ­ಪುರದ ವೈದ್ಯ­ರಿಂದ ಮಾಹಿತಿ ಪಡೆ­ಯು­ತ್ತಿದ್ದೇವೆ. ಅವರ ಎಲ್ಲ ಅಂಗಾಂಗ­ಗಳು ಸಹಜ ರೀತಿಯಲ್ಲಿ ಕಾರ್ಯ­ನಿರ್ವಹಿಸುತ್ತಿವೆ. ಶ್ವಾಸಕೋಶದ ಸೋಂಕು ಕಡಿಮೆ­ಯಾ­ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.