ಬೆಂಗಳೂರು: ಬಿಜೆಪಿಯ ಕುದುರೆ ವ್ಯಾಪಾರ ತಂತ್ರಕ್ಕೆ ಒಳಗಾಗುವುದನ್ನು ತಪ್ಪಿಸಲು ಜೆಡಿಎಸ್–ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ ಕೊಚ್ಚಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಶಾಂಗ್ರಿಲಾ ಹೋಟೆಲ್ನಿಂದ ಜೆಡಿಎಸ್ ಶಾಸಕರು ಹಾಗೂ ಈಗಲ್ಟನ್ ರೆಸಾರ್ಟ್ನಿಂದ ಕಾಂಗ್ರೆಸ್ ಶಾಸಕರು ಕೇರಳದ ಕೊಚ್ಚಿಯ ಸಮೀಪದ ಬ್ರಂಟನ್ ಬೋಟ್ ಯಾರ್ಡ್ ಸೇರಿ ವಿವಿಧ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಎಚ್ಎಎಲ್ ವಿಮಾನ ನಿಲ್ದಾಣದವರೆಗೂ ಬಸ್ಗಳಲ್ಲಿ ತೆರಳಲಿರುವ ಶಾಸಕರು ವಿಶೇಷ ವಿಮಾನದಲ್ಲಿ ಕೊಚ್ಚಿಗೆ ಪ್ರಯಾಣ ಬೆಳಸಲಿದ್ದಾರೆ.
* ಇಬ್ಬರು ಪಕ್ಷೇತರ ಶಾಸಕರು ನಮ್ಮೊಂದಿಗೆ ಇದ್ದಾರೆ. ನಾವು ರೆಸಾರ್ಟ್ ಭದ್ರತೆ ನೀಡುವಂತೆ ಕೇಳಿರಲಿಲ್ಲ.
–ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.