ADVERTISEMENT

ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ

ಭಾಗೀರಥಿ, ಮಹೇಶ್‌, ಗಣೇಶ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ
ಕೊನೆಗೂ ರಂಗಾಯಣಕ್ಕೆ ನಿರ್ದೇಶಕರ ನೇಮಕ   

ಬೆಂಗಳೂರು: ನಾಟಕ ಕರ್ನಾಟಕ ರಂಗಾಯಣದ ಮೂರು ಕೇಂದ್ರಗಳಿಗೂ ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಕೇಂದ್ರಕ್ಕೆ ಭಾಗೀರಥಿ ಬಾಯಿ ಕದಂ, ಶಿವಮೊಗ್ಗಕ್ಕೆ ಎಂ. ಗಣೇಶ್‌, ಕಲಬುರ್ಗಿ ಕೇಂದ್ರಕ್ಕೆ ಮಹೇಶ್‌  ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಮೇ 25ರಂದು ‘ರಂಗ ಸಮಾಜ’ ಸಭೆ ನಡೆಸಿ ಮೂರೂ ಕೇಂದ್ರಗಳಿಗೆ ತಲಾ ಮೂವರ ಹೆಸರನ್ನು ಶಿಫಾರಸು ಮಾಡಿತ್ತು.

ADVERTISEMENT

ಮೈಸೂರು ಕೇಂದ್ರದ ನಿರ್ದೇಶಕರ ಹುದ್ದೆ 9 ತಿಂಗಳಿಂದ ಖಾಲಿ ಇದ್ದರೆ ಶಿವಮೊಗ್ಗ ಮತ್ತು ಕಲಬುರ್ಗಿ ಕೇಂದ್ರದ ನಿರ್ದೇಶಕರ ಸ್ಥಾನ ಖಾಲಿಯಾಗಿ ವರ್ಷವೇ ಕಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.