ADVERTISEMENT

ಗುಟ್ಕಾ: ಶೀಘ್ರ ಜನಪ್ರತಿನಿಧಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ಬೆಂಗಳೂರು: ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಬೆಳೆಯುವ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದರು.

ಪ್ರತಿಪಕ್ಷಗಳ ಸದಸ್ಯರ ಬೇಡಿಕೆ ಯಂತೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುಟ್ಕಾ ನಿಷೇಧದ ಬಳಿಕೆ ಅಡಿಕೆ ದರ ಕುಸಿದಿದೆ ಎಂಬ ವಾದದಲ್ಲಿ ಹುರುಳಿಲ್ಲ. ರಾಜ್ಯದ ಯಾವುದೇ ಮಾರುಕಟ್ಟೆಗಳಲ್ಲೂ ದರ ಕುಸಿದಿಲ್ಲ ಎಂದು ಅಂಕಿ-ಅಂಶ ನೀಡಿದರು.

`ಜೂನ್ 3ರೊಳಗೆ ಗುಟ್ಕಾ ನಿಷೇಧಿಸುವುದು ಅನಿವಾರ್ಯ ಆಗಿತ್ತು. ಸುಪ್ರೀಂಕೋರ್ಟ್ ಈ ಕುರಿತು ಸ್ಪಷ್ಟವಾದ ನಿರ್ದೇಶನ ನೀಡಿತ್ತು. ಜೂನ್ 26ರೊಳಗೆ ಈ ಕುರಿತು ವರದಿ ಸಲ್ಲಿಕೆಗೆ ಕಾಲಾವಕಾಶ ಇದೆ. ಇದನ್ನು ತಪ್ಪಾಗಿ ಅರ್ಥೈಸು ವುದು ಬೇಡ. ಸರ್ಕಾರ ಸಿಗರೇಟು, ಬೀಡಿ ಲಾಬಿಗೆ ಮಣಿದಿದೆ ಎಂಬ ಟೀಕೆಗಳಲ್ಲಿ ಅರ್ಥವಿಲ್ಲ. ನಾವು ಯಾವ ಲಾಬಿಗೂ ಮಣಿಯುವುದಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.