ADVERTISEMENT

ಗೂಡ್ಸ್ ರೈಲು ಚಾಲಕನ ಕೊಲೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಸಂಡೂರು (ಬಳ್ಳಾರಿ ಜಿಲ್ಲೆ): ತೋರಣಗಲ್ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ಗೂಡ್ಸ್ ರೈಲು ಸಹಾಯಕ ಚಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.

ಗೂಡ್ಸ್ ರೈಲು ಚಾಲಕ  ಶೌರಿ ಕುಮಾರ್ ಅವರು ಸಂಜೀವ ಕಮಾರ್(24) ಅವರಿಗೆ ಇರಿದಿದ್ದರಿಂದ ಸಂಜೀವ ಮೃತಪಟ್ಟಿದ್ದಾರೆ. ಬಿಹಾರ್ ಮೂಲದ ಸಂಜೀವ್ ಕುಮಾರ್ ಮತ್ತು ಆಂಧ್ರ ಮೂಲದ ಶೌರಿ ಕುಮಾರ್ ರೈಲು  ಗೂಡ್ಸ್ ವಿಭಾಗದಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಶ್ರಾಂತಿ ಕೊಠಡಿಯಲ್ಲಿ ಈ ಕೃತ್ಯ ನಡೆದಿದ್ದು,  ಗಾರ್ಡ ಸುಭಾನ್ ದೂರು ನೀಡಿದ್ದು, ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.