ಬೆಂಗಳೂರು: ‘ಸಮ್ಮೇಳನ ಮೆರವಣಿಗೆ ಬ್ಯಾಡ್ಜ್ಗಳನ್ನು ವಿತರಿಸದೇ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಅಪಮಾನ ಎಸಗಿರುವುದರಿಂದ ಸಮ್ಮೇಳನ ಗೋಷ್ಠಿಯ ಅಧ್ಯಕ್ಷತೆ ವಹಿಸುವುದಿಲ್ಲ’ ಎಂದು ಲೇಖಕ ಪುಸ್ತಕಮನೆ ಹರಿಹರ ಪ್ರಿಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಾನುವಾರ ನಡೆಯಬೇಕಿದ್ದ ‘ಪರಂಪರೆ ಮತ್ತು ಕನ್ನಡ’ ಗೋಷ್ಠಿಯ ಅಧ್ಯಕ್ಷನಾಗಿ ನಾನು ಭಾಗವಹಿಸುತ್ತಿದ್ದು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬ್ಯಾಡ್ಜ್ ಕೇಳಿದರೆ ಶುಕ್ರವಾರ ಮುಂಜಾನೆ 6 ಗಂಟೆಗೆ ಬರಲು ಸಿಬ್ಬಂದಿ ಸೂಚಿಸಿದರು. ದೂರವಾಣಿ ಕರೆ ಮಾಡಿ ಬ್ಯಾಡ್ಜ್ ಅಗತ್ಯವಿದೆ ಎಂದು ತಿಳಿಸಿದ್ದರೂ ಸ್ಥಳಕ್ಕೆ ಹೋದಾಗ ನಿಮ್ಮೊಬ್ಬರಿಗೇ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅವಮಾನಿಸಲಾಯಿತು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.