ADVERTISEMENT

ಜಿ.ದಯಾನಂದ ನಿಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 16:33 IST
Last Updated 18 ಜೂನ್ 2018, 16:33 IST
ಜಿ.ದಯಾನಂದ
ಜಿ.ದಯಾನಂದ   

ಚಿಕ್ಕಮಗಳೂರು: ಇಲ್ಲಿನ ರಾಮೇಶ್ವರನಗರದ ನಿವಾಸಿ ವ್ಯಂಗ್ಯಚಿತ್ರ ಕಲಾವಿದ, ಛಾಯಾಗ್ರಾಹಕ ಜಿ.ದಯಾನಂದ (58) ಮಣಿಪಾಲದ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಅವರಿಗೆ ಪತ್ನಿ ಯಶೋಧಾ, ಪುತ್ರಿ ಹರ್ಷಿತಾ, ತಾಯಿ ಲಕ್ಷ್ಮಿದೇವಿ ಇದ್ದಾರೆ. ದಯಾನಂದ ಅವರು 38 ವರ್ಷಗಳಿಂದ ವ್ಯಂಗ್ಯಚಿತ್ರಕಾರರಾಗಿ, ಪ್ರತಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರಗಳಿಗೆ ಹಲವು ಪ್ರಶಸ್ತಿಗಳು ಸಂದಿವೆ.

ನಗರದ ಕೆಎಸ್‌ಆರ್‌ಟಿಸಿ ಡಿಪೊ ಬಳಿಯ ಚಿತಾಗಾರದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.