ಬೆಂಗಳೂರು: ‘ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲು ನಿರ್ಧರಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
‘ಇದನ್ನು ಅನೇಕರು ಟೀಕಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ನಿಂದ ಒಂದು ಬಜೆಟ್ ಮಂಡನೆಯಾಗಿದೆ, ನೀವು ಪೂರಕ ಬಜೆಟ್ ಮಂಡನೆ ಮಾಡಿದರೆ ಸಾಕಲ್ಲವಾ ಎಂದಿದ್ದಾರೆ. ಬಜೆಟ್ನಿಂದ ಎಲ್ಲಿ ಜನಮನ್ನಣೆ ಗಳಿಸುತ್ತೇನೆ ಎನ್ನುವ ಆತಂಕ ಅವರಲ್ಲಿರಬಹುದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.