ADVERTISEMENT

ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಏಣಗಿ ಬಾಳಪ್ಪ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 13:19 IST
Last Updated 18 ಸೆಪ್ಟೆಂಬರ್ 2013, 13:19 IST

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ರಂಗಕರ್ಮಿ, ಶತಾಯುಷಿ ಏಣಗಿ ಬಾಳಪ್ಪ ಉದ್ಘಾಟಿಸುವರು.

ಅಕ್ಟೋಬರ್‌ 5ರಂದು ಸಂಜೆ 5.30 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಗರದ ಅಂಬಾ ವಿಲಾಸ ಅರಮನೆಯಲ್ಲಿ ನಡೆಯಲಿದೆ. ಅಕ್ಟೋಬರ್‌ 13ರವರೆಗೆ ನಗರದ ಅಂಬಾ ವಿಲಾಸ ಅರಮನೆ, ಜಗನ್ಮೋಹನ ಅರಮನೆ, ಪುರಭವನ, ಗಾನಭಾರತೀ ಭವನ, ಕುಪ್ಪಣ್ಣ ಉದ್ಯಾನವನ ಹಾಗೂ ಚಿಕ್ಕ ಗಡಿಯಾರ ಆವರಣದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ರಷ್ಯಾದ ಕಲಾವಿದರ ನೃತ್ಯ, ಪುರಭವನದಲ್ಲಿ ನಾಟಕಗಳ ಪ್ರದರ್ಶನ, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ವಲಯದ ಕಾರ್ಯಕ್ರಮಗಳು ಕಳೆಗಟ್ಟಲಿವೆ. ಇವುಗಳಲ್ಲಿ ಬಿಹು ನೃತ್ಯ, ಕಲರಿ ಪಯಟ್‌, ಅರ್ಜುನ ನೃತ್ಯ, ಪಟಿಯಾನಿ ನೃತ್ಯ, ಸೋಂಗಿಮುಖವಾಟೆ, ಬೊನಾಲು ನೃತ್ಯ, ಬರೇಡಿ ನೃತ್ಯ, ಸಿದಿ್ದಧಮಾಲ್‌, ಭಾಂಗ್ರಾ, ಸಂಭಲು್ಪರಿ, ಮಣಿಪುರಿ ಹಾಗೂ ಕುಸಾನು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಇದರೊಂದಿಗೆ ಅ. 6ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ‘ಸೂರ್ಯನಿಂದ ಚಂದ್ರನೆಡೆಗೆ’ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಕಲಾವಿದರಿಂದ ಅರಮನೆ ಆವರಣದಲ್ಲಿ ನಡೆಯಲಿವೆ. ಅಲ್ಲದೇ ಅ. 6ರಂದು ಸಂಜೆ 6 ಗಂಟೆಗೆ ‘ಮೈಸೂರು ಮಲ್ಲಿಗೆ’ ಎಂಬ ಕಾವ್ಯ-–ಕುಂಚ–-ನೃತ್ಯ ಕಾರ್ಯಕ್ರಮವನ್ನು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.