ADVERTISEMENT

ಧಾರವಾಡ ತಲುಪಿದ ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 10:22 IST
Last Updated 28 ನವೆಂಬರ್ 2017, 10:22 IST
ಧಾರವಾಡ ತಲುಪಿದ ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಪಾರ್ಥಿವ ಶರೀರ
ಧಾರವಾಡ ತಲುಪಿದ ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಪಾರ್ಥಿವ ಶರೀರ   

ಧಾರವಾಡ: ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಅವರ ಪಾರ್ಥಿವ ಶರೀರವನ್ನು ಧಾರವಾಡಕ್ಕೆ ತರಲಾಗಿದೆ.

ಛತ್ತಿಸಗಡ-ಮಹಾರಾಷ್ಟ್ರ ಗಡಿಯ ಗಡಚಿರೊಳ್ಳಿಯಲ್ಲಿ ಮೊನ್ನೆ ನಡೆದಿದ್ದ ನಕ್ಸಲ್ ಕೂಬಿಂಗ್‌ ವೇಳೆ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮರಾಗಿದ್ದರು.

ಹುತಾತ್ಮ ಮಂಜುನಾಥ ಅವರು ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದವರು.

ADVERTISEMENT

ಧಾರವಾಡದ ಆರ್‌‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ಎಸ್ಪಿ‌ ಜಿ. ಸಂಗೀತಾ, ಶ್ರೀ ಬಸವಾನಂದ ಸ್ವಾಮೀಜಿ ಹಾಗೂ ಇತರ ಗಣ್ಯರು ಗೌರವ ಸಮರ್ಪಣೆ ಮಾಡಿದರು.

ಮಧ್ಯಾಹ್ನ ಮನಗುಂಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ಆಯುಕ್ತ ಮೇಜರ್ ಸಿದ್ದಲಿಂಗಯ್ಯ, ಶಿವು ಹಿರೇಮಠ, ಪಾಲಿಕೆ ಮೇಯರ್ ಡಿ.ಕೆ. ಚವ್ಹಾಣ, ಶಂಕರ ಶಿಳಕೆ, ಬಸವರಾಜ ದೇವರು, ಬಸವಾನಂದ ಸ್ವಾಮೀಜಿ, ಹು-ಧಾ ಪೊಲೀಸ್ ಅಯುಕ್ತ ನಾಗರಾಜ, ಉಪ ಆಯುಕ್ತೆ ರೇಣುಕಾ ಸುಕುಮಾರ, ಡಿವೈಎಸ್ಪಿ ಚಂದ್ರಶೇಖರ, ತಾ.ಪಂ ಸದಸ್ಯ ಫಕ್ಕೀರಪ್ಪ ಬುಡ್ಡಿಕಾಯಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.