ADVERTISEMENT

ನರಸಿಂಹಸ್ವಾಮಿಗೆ ಪು.ತಿ.ನ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಡಾ.ಹುಲಿವಾನ ನರಸಿಂಹಸ್ವಾಮಿ
ಡಾ.ಹುಲಿವಾನ ನರಸಿಂಹಸ್ವಾಮಿ   

ಮಂಡ್ಯ: ಮುಂಬೈನ ಅಖಿಲ ಭಾರತ ಕನ್ನಡಿಗರ ಒಕ್ಕೂಟ ‘ಸಂಸಾಧನ’ ಸಂಸ್ಥೆ ನೀಡುವ ಈ ಬಾರಿಯ ಪು.ತಿ.ನ ರಾಷ್ಟ್ರೀಯ ಪ್ರಶಸ್ತಿಗೆ ನಗರದ ಸಾಹಿತಿ ಡಾ.ಹುಲಿವಾನ ನರಸಿಂಹಸ್ವಾಮಿ ಆಯ್ಕೆಯಾಗಿದ್ದಾರೆ.

₹ 50 ಸಾವಿರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ. ನರಸಿಂಹಸ್ವಾಮಿ ಅವರು 450ಕ್ಕೂ ಹೆಚ್ಚು ಕನ್ನಡ ಕೃತಿ ಪ್ರಕಟಿಸಿದ್ದು, ಕೆಲ ಪುಸ್ತಕಗಳು ಹಿಂದಿ ಹಾಗೂ ಇಂಗ್ಲಿಷಿಗೆ ಭಾಷಾಂತರಗೊಂಡಿವೆ.

ಮುಂಬೈನಲ್ಲಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸಾಧನ ಸಂಸ್ಥೆಯ ಅಧ್ಯಕ್ಷ ಡಾ.ಪದ್ಮನಾಭ ಅಯ್ಯಂಗಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.