
ಪ್ರಜಾವಾಣಿ ವಾರ್ತೆಬೆಂಗಳೂರು: ನವೋದಯ ವಿದ್ಯಾಲಯಗಳ 9 ಮತ್ತು 10ನೇ ತರಗತಿಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಏಕಾಏಕಿ ಬದಲಾಗಿದೆ. ಮೊದಲ ದಿನವಾದ ಶನಿವಾರ ಕನ್ನಡ ಪರೀಕ್ಷೆ ನಡೆಯಲಿದೆ.
ಮೊದಲಿನ ಪಟ್ಟಿ ಪ್ರಕಾರ ಶನಿವಾರ 9ನೇ ತರಗತಿಗೆ ಗಣಿತ ಮತ್ತು 10ನೇ ತರಗತಿಗೆ ವಿಜ್ಞಾನ ಪರೀಕ್ಷೆ ನಡೆಯಬೇಕಾಗಿತ್ತು.
ದಿಢೀರ್ ಬದಲಾವಣೆಯಿಂದ ಮಕ್ಕಳು ಗೊಂದಲ, ಮಾನಸಿಕ ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದು ಚಿಂತಾಮಣಿ ತಾಲ್ಲೂಕಿನ ಏನಿಗದೆಲೆಯ ನವೋದಯ ಶಾಲೆಯ ಶಿಕ್ಷಕ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.
ಸಿಬಿಎಸ್ಇ ಶಾಲೆಗಳಿಗೂ ಪರಿಷ್ಕೃತ ವೇಳಾಪಟ್ಟಿ ಅನ್ವಯಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.