ADVERTISEMENT

ನಾಡು ಸೇರಿದ ಜಿಂಕೆಗೆ ಸ್ಥಳೀಯರ ಜೀವದಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2013, 19:52 IST
Last Updated 4 ಫೆಬ್ರುವರಿ 2013, 19:52 IST
ಹೊಸಕೋಟೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಮನೆಯೊಂದರ ಬಳಿ ಭಾನುವಾರ ಆಶ್ರಯ ಪಡೆದಿದ್ದ ಜಿಂಕೆ ಮರಿಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು
ಹೊಸಕೋಟೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಮನೆಯೊಂದರ ಬಳಿ ಭಾನುವಾರ ಆಶ್ರಯ ಪಡೆದಿದ್ದ ಜಿಂಕೆ ಮರಿಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು   

ಹೊಸಕೋಟೆ: ಪಟ್ಟಣದ ಕನಕನಗರದ ನಿರ್ಮಾಣ ಹಂತದ ಮನೆಯೊಂದರ ಹಿಂಭಾಗದಲ್ಲಿ ಭಾನುವಾರ ಜಿಂಕೆ ಮರಿಯೊಂದು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.

ಬಹಳಷ್ಟು ನಿತ್ರಾಣಗೊಂಡಿದ್ದ ಆ ಜಿಂಕೆಯನ್ನು ನೋಡಲು ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಬೆದರಿದ ಅದು ಅಲ್ಲಿಂದ ಚಂಗನೆ ಎಗರಿ ಬಡಾವಣೆಯಲ್ಲಿ ಓಟ ಕಿತ್ತಿತು.

ಅಲ್ಲಿನ ನಿವಾಸಿಗಳಾದ ಆನಂದ್, ನೂತಿ ಮಂಜುನಾಥ್ ಹಾಗು ಸ್ನೇಹಿತರು ಪ್ರಯಾಸಪಟ್ಟು ಅದನ್ನು ಹಿಡಿದರು. ನಾಯಿಪಾಲಾಗುವುದನ್ನು ತಪ್ಪಿಸಿದ ಸಂತಸ ಅವರಲ್ಲಿತ್ತು.

ಜಿಂಕೆಗೆ ನೀರು ಕುಡಿಸಿ ನಂತರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.