ADVERTISEMENT

‘ನಿಖಿಲ್ ವಿರುದ್ಧ ಅದೆಂತಹ ಬಾಂಬ್ ಸಿಡಿಸ್ತಾರೆ ಸಿಡಿಸಲಿ, ನಾನೂ ನೋಡ್ತೀನಿ’: ಕುಮಾರಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 15:09 IST
Last Updated 28 ಏಪ್ರಿಲ್ 2018, 15:09 IST
‘ನಿಖಿಲ್ ವಿರುದ್ಧ ಅದೆಂತಹ ಬಾಂಬ್ ಸಿಡಿಸ್ತಾರೆ ಸಿಡಿಸಲಿ, ನಾನೂ ನೋಡ್ತೀನಿ’: ಕುಮಾರಸ್ವಾಮಿ ಸವಾಲು
‘ನಿಖಿಲ್ ವಿರುದ್ಧ ಅದೆಂತಹ ಬಾಂಬ್ ಸಿಡಿಸ್ತಾರೆ ಸಿಡಿಸಲಿ, ನಾನೂ ನೋಡ್ತೀನಿ’: ಕುಮಾರಸ್ವಾಮಿ ಸವಾಲು   

ಬೆಂಗಳೂರು: 'ನನ್ನ ಪುತ್ರ ನಿಖಿಲ್ ವಿರುದ್ದ ಬಾಲಕೃಷ್ಣ ಅದೆಂಥಾ ಬಾಂಬ್ ಸಿಡಿಸ್ತಾರೆ ಸಿಡಿಸಲಿ, ನಾನೂ ನೋಡ್ತೀನಿ. ಅವರು ಹೇಳಿದಂತೆ ನಿಖಿಲ್ ಬಗ್ಗೆ ಸಾಕ್ಷಿ ಇದ್ದರೆ ಸಿ.ಡಿ. ಬಿಡುಗಡೆ ಮಾಡಲಿ' ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.

ಪ್ರಚಾರಕ್ಕೆ ಹೋದ ಕಡೆಗಳಲ್ಲಿ ನಿಖಿಲ್‍ಗೌಡ ನಮ್ಮ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ನಮ್ಮ ಬಳಿಯಿರುವ ಅವರ ಬಹಳಷ್ಟು ಸಿಡಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಎಚ್‌.ಸಿ. ಬಾಲಕೃಷ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಶನಿವಾರ ಮಾತನಾಡಿದ ಅವರು, ‘ರಾಮನಗರ ಚನ್ನಪಟ್ಟಣದಲ್ಲಿ ಜಮೀರ್ ವೋಟ್ ಇಲ್ಲ. ಇನ್ನು ನನ್ನನ್ನ ಹೇಗೆ ಸೋಲಿಸಲು ಸಾಧ್ಯ? ನನ್ನ ಭವಿಷ್ಯ ಜಮೀರ್ ಕೈಯಲ್ಲಿಲ್ಲ. ರಾಮನಗರ ಚನ್ನಪಟ್ಟಣ ಕ್ಷೇತ್ರದ ಜನರ ಕೈಯಲ್ಲಿದೆ’ ಎಂದು ಟಾಂಗ್ ಕೊಟ್ಟರು.

ADVERTISEMENT

ಹಾಗೆಯೇ ನಾನು ನನ್ನ ಕ್ಷೇತ್ರಗಳನ್ನ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಆದರೆ ಕಳೆದ ಹದಿನೈದು ದಿನಗಳಿಂದ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೇ ಸುತ್ತಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.