
ಪ್ರಜಾವಾಣಿ ವಾರ್ತೆಯಲ್ಲಾಪುರ (ಉ.ಕ ಜಿಲ್ಲೆ): ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸಿದ್ದ ಶಿರಸಿಯ ಜಾನ್ಮನೆ ಕುಟುಂಬದ ಆರ್.ಜಿ. ಹೆಗಡೆ (ರಮೇಶ ಗಣಪತಿ ಹೆಗಡೆ) ಇದೇ 10ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಿಧನ ಹೊಂದಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭಾರತ ನಡೆಸಿದ ಸಮರದಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದ ಅವರು, ಎನ್.ಸಿ.ಸಿ.ಯ ಸರ್ವತೋಮುಖ ಬೆಳವಣಿಗೆಗೂ ಅಪಾರವಾಗಿ ಶ್ರಮಿಸಿದ್ದರು.
ನಿವೃತ್ತ ಡಿಎಸ್ಪಿ ಜಿ.ಟಿ. ಹೆಗಡೆ ಜಾನ್ಮನೆ ಅವರ ಪುತ್ರರಾಗಿದ್ದ ರಮೇಶ, ಇಲ್ಲಿಯ ಕಾಂಗ್ರೆಸ್ ಧುರೀಣ ಪ್ರಮೋದ ಹೆಗಡೆ ಅವರ ಸಹೋದರಿಯ ಪತಿಯಾಗಿದ್ದರು. ರಮೇಶ ಅವರಿಗೆ ಪತ್ನಿ, ಪುತ್ರ-, ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.