ADVERTISEMENT

ಪ್ರತಾಪಗೌಡ ನಡೆ ಇನ್ನೂ‌ ನಿಗೂಢ: ಶನಿವಾರ ಪ್ರತ್ಯಕ್ಷ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 18 ಮೇ 2018, 12:59 IST
Last Updated 18 ಮೇ 2018, 12:59 IST
ಪ್ರತಾಪಗೌಡ ನಡೆ ಇನ್ನೂ‌ ನಿಗೂಢ: ಶನಿವಾರ ಪ್ರತ್ಯಕ್ಷ ಸಾಧ್ಯತೆ
ಪ್ರತಾಪಗೌಡ ನಡೆ ಇನ್ನೂ‌ ನಿಗೂಢ: ಶನಿವಾರ ಪ್ರತ್ಯಕ್ಷ ಸಾಧ್ಯತೆ   

ಮಸ್ಕಿ (ರಾಯಚೂರು): ಗುರುವಾರ ಬೆಳಿಗ್ಗೆಯಿಂದ ಸಂಪರ್ಕ ಕಡಿದುಕೊಂಡಿರುವ ಮಸ್ಕಿ‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಅವರ ಮುಂದಿನ ನಡೆ ಇನ್ನೂ‌ ನಿಗೂಢವಾಗಿದೆ.

ಮೇ‌ 16ರಂದು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಅವರನ್ನು ಬಿಜೆಪಿ ಶಾಸಕ ಬಿ.ಶ್ರೀರಾಮುಲ ಸಂಪರ್ಕ ಮಾಡಿದ್ದಾರೆ. ಅಲ್ಲಿಂದ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಇದೂವರೆಗೂ ಪ್ರತಾಪಗೌಡ ಅವರಾಗಲಿ, ಕಾಂಗ್ರೆಸ್‌ನ ತಾಲ್ಲೂಕು‌ ಘಟಕದ ಅಧ್ಯಕ್ಷರಾಗಲಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ ‘ನಾಟ್ ರೀಚಬಲ್’ ಅಥವಾ ‘ಸ್ವಿಚ್ ಆಫ್‌’ ಎಂದು ಕೇಳಿ ಬರುತ್ತಿದೆ.

ಕುಟುಂಬದ ಸ್ಪಷ್ಟನೆ: ‘ಶಾಸಕರು ಹೃದಯಬೇನೆಯಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ಅವಶ್ಯವಿತ್ತು. ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಹೊರ ರಾಜ್ಯದ ನಿಸರ್ಗ ಚಿಕಿತ್ಸಾಲಯದಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬರುತ್ತಾರೆ’ ಎಂದು ಕುಟುಂಬದ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.