ADVERTISEMENT

ಬಂಡೀಪುರದಲ್ಲಿ ಹುಲಿಗಳ ಸಾವು: ತನಿಖೆ ಚುರುಕು

2 ವರದಿಯಲ್ಲಿ ವಿಷದ ಪ್ರಸ್ತಾಪವಿಲ್ಲ, ಶಂಕೆ ವ್ಯಕ್ತಪಡಿಸಿದ ಕೊಯಮತ್ತೂರು ವರದಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 3 ತಿಂಗಳ ಹಿಂದೆ ಪತ್ತೆಯಾದ ಹುಲಿಗಳ ಮೃತದೇಹಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 3 ತಿಂಗಳ ಹಿಂದೆ ಪತ್ತೆಯಾದ ಹುಲಿಗಳ ಮೃತದೇಹಗಳು   

ಚಾಮರಾಜನಗರ: ಬಂಡೀಪುರಹುಲಿ ರಕ್ಷಿತಾರಣ್ಯದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 3 ತಿಂಗಳ ಹಿಂದೆ ಮೃತಪಟ್ಟ 2 ಹುಲಿಗಳ ಸಾವಿನ ತನಿಖೆಯನ್ನು ಅರಣ್ಯ ಇಲಾಖೆ ಚುರುಕುಗೊಳಿಸಿದೆ.

ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿ ವಿಷ ‌ಪ್ರಾಶನದ ಶಂಕೆ ವ್ಯಕ್ತಪಡಿಸಿದೆ. ಆದರೆ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಜಿಕೆವಿಕೆ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ ನೀಡಿರುವ ವರದಿಯಲ್ಲಿ ಹುಲಿಗಳ ದೇಹದ ಅಂಗಾಂಗಗಳಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.

‘ಕೊಯಮತ್ತೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬಂದಿರುವುದು ಪ್ರಾಥಮಿಕ ವರದಿಯಷ್ಟೇ. ಇದರಲ್ಲಿ ಹುಲಿಗಳ ದೇಹದಲ್ಲಿ ರಾಸಾಯನಿಕಗಳು ಪತ್ತೆಯಾಗಿವೆ ಎಂದಿದೆ. ಅಂತಿಮ ವರದಿ ಬಂದ ಬಳಿಕ ಗೊತ್ತಾಗಲಿದೆ’ ಎಂದು ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.