ADVERTISEMENT

ಬಡ್ಡಿ ಮನ್ನಾಕ್ಕೆ ಚಿಂತನೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಹುಬ್ಬಳ್ಳಿ: ಆಶ್ರಯ ಮನೆ ಫಲಾನುಭವಿಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ನೆರೆ ಸಂತ್ರಸ್ತರಿಗಾಗಿ ಆಸರೆ ಯೋಜನೆಯಡಿ ನವಲಗುಂದ ತಾಲ್ಲೂಕಿನ ಅಮರಗೋಳದಲ್ಲಿ ನಿರ್ಮಿಸಿದ ಮನೆಗಳ ವಿತರಣೆ ಸಮಾರಂಭದ ಸಂದರ್ಭದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.‘ಆಶ್ರಯ ಮನೆಯ ಫಲಾನುವಿಗಳಿಂದ ರೂ. 2600 ಕೋಟಿ  ಸಾಲ ಬಾಕಿ ಬರಬೇಕಾಗಿದೆ. ಇದರಲ್ಲಿ ರೂ. 1085 ಕೋಟಿ  ಬಡ್ಡಿ ಸೇರಿಕೊಂಡಿದೆ. ಈ ಬಡ್ಡಿ ಮನ್ನಾ ಮಾಡಲು ಸರ್ಕಾರ ಆಲೋಚಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.