ADVERTISEMENT

ಬಳ್ಳಾರಿ: ಡೆಂಗೆಗೆ ಮೂವರು ಮಕ್ಕಳು ಬಲಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಬಳ್ಳಾರಿ: ಜಿಲ್ಲೆಯಲ್ಲಿ ಡೆಂಗೆ ಜ್ವರ ತೀವ್ರಗೊಳ್ಳುತ್ತಿದ್ದು, ಶಂಕಿತ ಡೆಂಗೆಯಿಂದ ಬಳಲುತ್ತಿದ್ದ ಒಂದೇ ಮನೆಯ ಇಬ್ಬರು ಸೇರಿದಂತೆ ಮೂವರು ಬಾಲಕಿಯರು ಸಾವಿಗೀಡಾಗಿರುವ ಘಟನೆ ಭಾನುವಾರ ಸಂಭವಿಸಿದೆ.

ಕಪಗಲ್‌ ರಸ್ತೆ ವಿಶ್ವೇಶ್ವರ ನಗರದ ತಾಯಣ್ಣ ಮತ್ತು ಗಿರಿಜಾ ಅವರ ಪುತ್ರಿಯರಾದ ಐಶ್ವರ್ಯ (5) ಮತ್ತು ಸೌಮ್ಯ (3) ಹಾಗೂ ತಾಲ್ಲೂಕಿನ ಹೊಸಯರಗುಡಿಯ  ಶಾಮಕುಮಾರ್‌ ಅವರ ಪುತ್ರಿ ಗೀತಾಂಜಲಿ (9) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.