ADVERTISEMENT

ಬಸ್ ಚಾಲಕನ ಸಮಯಪ್ರಜ್ಞೆ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 20:15 IST
Last Updated 15 ಜುಲೈ 2017, 20:15 IST
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಅಪಾಯದಿಂದ ಪಾರಾದ ದೃಶ್ಯಗಳು
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಅಪಾಯದಿಂದ ಪಾರಾದ ದೃಶ್ಯಗಳು   

ಕುಶಾಲನಗರ (ಕೊಡಗು ಜಿಲ್ಲೆ): ಸಮೀಪದ ಗುಡ್ಡೆಹೊಸೂರು ಸಮೀಪದ ಬಿ.ಎಂ ರಸ್ತೆಯಲ್ಲಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇದು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆಯು ಸಹೋದರನ ಬೈಕ್‌ನಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರಿಗೆ ತೆರಳುತ್ತಿದ್ದರು. ಬೊಳ್ಳೂರು ಪೆಟ್ರೋಲ್ ಬಂಕ್ ಎದುರು ರಸ್ತೆಯಲ್ಲಿ ಎಡಭಾಗದಿಂದ ಬಲಭಾಗಕ್ಕೆ ಹೋಗಲು ಬೈಕ್‌ ಏಕಾಏಕಿ ತಿರುಗಿಸಿದ್ದಾನೆ. ಆಗ ಕೆಎಸ್ಆರ್‌ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ತೋರಿ ಬಸ್‌ಅನ್ನು ಸಂಪೂರ್ಣ ಎಡಭಾಗಕ್ಕೆ ತಿರುಗಿಸಿ ಅಪಘಾತ ತಪ್ಪಿಸಿದ್ದಾರೆ.

ಬಸ್‌ ಹಿಂಬದಿಗೆ ಬೈಕ್‌ ತಾಗಿದ ಪರಿಣಾಮ ಮಹಿಳೆ ಬಸ್‌ನಡಿ ಸಿಲುಕಿಕೊಂಡರು. ವೇಗ ಕಡಿಮೆಯಿದ್ದ ಕಾರಣ ಅಪಾಯದಿಂದ ಪಾರಾದರು. ಬಸ್‌ ನಿಂತ ಬಳಿಕ ಮಹಿಳೆಯೇ ಹೊರಗೆ ಬಂದಿದ್ದಾರೆ. ತಲೆಗೆ ಸ್ಪಲ್ಪ ತರಚಿದ ಗಾಯವಾಗಿದೆ. ಸಹೋದರನಿಗೂ ಯಾವುದೇ ತೊಂದರೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.