ADVERTISEMENT

ಬಾಲಕಿ ಕೊಲೆ: ಗದ್ದೆಯಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಪಾಂಡವಪುರ: ಬಾಲಕಿಯನ್ನು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಹೂತು­ಹಾಕಿದ್ದ ಘಟನೆ ತಾಲ್ಲೂಕಿನ ನುಗ್ಗ­ಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.   ಗ್ರಾಮದ ಮಧು ಅಲಿಯಾಸ್ ಕೆಂಗ (19) ಬಂಧಿತ ಆರೋಪಿ.

ನುಗ್ಗಹಳ್ಳಿಯ ಸರ್ಕಾರಿ ಶಾಲೆಯ ಒಂದನೇ ತರಗತಿಯ ವಿದ್ಯಾ­ರ್ಥಿನಿ ಶುಕ್ರವಾರ ಸಂಜೆ ಮಲ ವಿಸ­­ರ್ಜ­ನೆಗೆ ಮನೆಯಿಂದ ಹೊರಹೋದ­ವಳು ಸಂಜೆ ಏಳು ಗಂಟೆ­ಯಾದರೂ ಮರಳಿ ಬರಲಿಲ್ಲ. ಇದರಿಂದ ಆತಂಕ­ಗೊಂಡ ಪೋಷಕರು ಬಾಲಕಿಗಾಗಿ
ಊರ­ಲ್ಲೆಲ್ಲ ಹುಡುಕಾಡಿದರೂ ಪತ್ತೆ­ಯಾಗ­ಲಿಲ್ಲ.

ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಇರುವ ಕಾರಣಕ್ಕೆ, ಬಾಲಕಿಗಾಗಿ ರಾತ್ರಿ ಹುಡುಕಾಟ ನಡೆಸಲು  ಗ್ರಾಮಸ್ಥರು ಹಿಂದೇಟು ಹಾಕಿದರು. ಹೀಗಾಗಿ, ಬೆಳಿಗ್ಗೆ ಪೋಷಕರು ಜಮೀನಿನ ಕಡೆ ಹುಡುಕಾಟ ನಡೆಸು­ತ್ತಿದಾಗ ಪುಟ್ಟಸಿದ್ದಮ್ಮ ಎಂಬು­ವವರ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದೆ. ಕಾಲಿನ ಸ್ವಲ್ಪ ಭಾಗ ಬಿಟ್ಟು ದೇಹವನ್ನು ಮಣ್ಣಿ­ನಿಂದ ಮುಚ್ಚ­ಲಾಗಿತ್ತು. ಮಗುವಿನ ಕೈ–ಕಾಲು­ಗಳನ್ನು ಕಬ್ಬಿನ ಗರಿಯಿಂದ ಕಟ್ಟಿದ್ದು, ಬಟ್ಟೆ­­ಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅತ್ಯಾಚಾರದ ಶಂಕೆ: ಆರೋಪಿ ಮಧು ಬಾಲಕಿಯನ್ನು ಕೊಲೆ ಮಾಡುವ ಮುನ್ನ ಅತ್ಯಾ­ಚಾರವೆಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶವ ಪರೀಕ್ಷೆ­ಯಿಂದ ಸತ್ಯ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.