ಬೆಂಗಳೂರು: ಪುರಿಗೆ ತೆರಳುವ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಬೆಂಗಳೂರಿನಿಂದ ಪುರಿಗೆ ತೆರಳುವ ರೈಲುಗಳ ಮೇಲಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಹೊಸ ರೈಲು ಗಾಡಿ ಆರಂಭಿಸಿದೆ. ಇದು ಈ ವರ್ಷದ ಅಂತ್ಯದವರೆಗೆ ಸಂಚರಿಸಲಿದೆ.
ಬೆಂಗಳೂರು ನಗರ ರೈಲು ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55ಕ್ಕೆ ಹೊರಡುವ `ಪುರಿ ಸಾಪ್ತಾಹಿಕ ಗರೀಬ್ ರಥ ಎಕ್ಸ್ಪ್ರೆಸ್~ ಸೋಮವಾರ ಬೆಳಿಗ್ಗೆ 5.50ಕ್ಕೆ ಪುರಿ ತಲುಪಲಿದೆ. ಈ ರೈಲು ಗಾಡಿಯ ಸಂಚಾರ ಶನಿವಾರದಿಂದ ಆರಂಭವಾಗಿದೆ.
ಪುರಿಯಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೊರಡುವ ರೈಲು ಶನಿವಾರ ರಾತ್ರಿ 10.45ಕ್ಕೆ ಬೆಂಗಳೂರು ತಲುಪಲಿದೆ. ಇದರ ಸಂಚಾರ ಶುಕ್ರವಾರದಿಂದಲೇ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.