ADVERTISEMENT

ಬೇಂದ್ರೆ ಸ್ಮೃತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2013, 19:30 IST
Last Updated 12 ಅಕ್ಟೋಬರ್ 2013, 19:30 IST

ಬೆಂಗಳೂರು: ದ.ರಾ.ಬೇಂದ್ರೆ ಕಾವ್ಯ­ಕೂಟ­ವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ‘ಬೇಂದ್ರೆ ಕಾವ್ಯ­ದಲ್ಲಿರುವ ಭೂಮಿತಾಯಿಯ ತತ್ವದ ಪ್ರಸ್ತುತತೆ’ ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಬೇಕು.

ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಪಡೆದ ಪರಿ­ಚಯ ಪತ್ರ ಹಾಗೂ ಸ್ವವಿವರ ಒಳ­ಗೊಂಡ ಪತ್ರವನ್ನು ಲೇಖನದ ಜತೆಗೆ ಕಳುಹಿಸಲು ತಿಳಿಸಿದೆ. ವಿಜೇ­ತರಿಗೆ ಪ್ರಥಮ (ರೂ4000), ದ್ವಿತೀಯ (ರೂ 3000) ಹಾಗೂ ತೃತೀಯ (ರೂ 2000) ಬಹುಮಾನವಿರುತ್ತದೆ.

ಲೇಖನಗಳು 2,500 ಪದಗಳ ಮಿತಿಯಲ್ಲಿರಬೇಕು. ಲೇಖನಗಳನ್ನು ಕಳಿಸಲು ಕೊನೆಯ ದಿನ ನ. 20.
ವಿಳಾಸ: ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ.ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ಅಡ್ಡ ರಸ್ತೆ, ನೇತಾಜಿ ನಗರ, ಮತ್ತೀಕೆರೆ. ದೂ: 99721 09209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.