ADVERTISEMENT

ಭೋಗ್ಯದ ಬದಲು 10 ವರ್ಷದ ಬಳಿಕ ಕ್ರಯಪತ್ರ

ಕೈಗಾರಿಕಾ ನಿವೇಶನ ಹಂಚಿಕೆ ನಿಯಮ ಬದಲು

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:05 IST
Last Updated 15 ಜುಲೈ 2017, 9:05 IST
ಭೋಗ್ಯದ ಬದಲು 10 ವರ್ಷದ ಬಳಿಕ ಕ್ರಯಪತ್ರ
ಭೋಗ್ಯದ ಬದಲು 10 ವರ್ಷದ ಬಳಿಕ ಕ್ರಯಪತ್ರ   

ಬೆಂಗಳೂರು: ಕೈಗಾರಿಕಾ ನಿವೇಶನಗಳನ್ನು 99 ವರ್ಷ ಭೋಗ್ಯದ ಆಧಾರದ ಮೇಲೆ ಹಂಚಿಕೆ ಮಾಡುವ ಬದಲು  10 ವರ್ಷಗಳ ಅವಧಿಗೆ ಭೋಗ್ಯ ಕಮ್ ಕ್ರಯಪತ್ರದ ಆಧಾರದ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಗಳಿಂದ (ಕೆಎಸ್‌ಐಐಡಿಸಿ) ಕೈಗಾರಿಕಾ ನಿವೇಶನ ಹಂಚಿಕೆ ಮಾಡುವ ನಿಯಮಗಳಲ್ಲಿ ಬದಲಾವಣೆ ತಂದಿದ್ದ ಸರ್ಕಾರ 99 ವರ್ಷ ಭೋಗ್ಯದ ಆಧಾರದ ಮೇಲೆ ನೀಡಲು ಆರಂಭಿಸಿತ್ತು. ಇದಕ್ಕೆ ಸಣ್ಣ, ಮಧ್ಯಮ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ನಿಯಮ ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿಯಮ ಬದಲಾವಣೆಗೆ ಅನುಮೋದನೆ ನೀಡಲಾಗಿತ್ತು. ಈ ನಿಯಮವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನ್ವಯವಾಗುತ್ತದೆ. ಹತ್ತು ವರ್ಷಗಳಲ್ಲಿ ಭೋಗ್ಯ ಕಮ್‌ ಕ್ರಯಪತ್ರದ ಷರತ್ತುಗಳನ್ನು ಪಾಲಿಸಿದರೆ ನಿವೇಶನ ಹಂಚಿಕೆದಾರರು ಶುದ್ಧ  ಕ್ರಯಪತ್ರ ಪಡೆಯಬಹುದು.

ADVERTISEMENT

  ಗರಿಷ್ಠ ಎರಡು  ಎಕರೆವರೆಗಿನ ನಿವೇಶನ ಅಥವಾ ಶೆಡ್‌ಗಳಿಗೆ ಮಾತ್ರ ಹೊಸ ನಿಯಮ ಅನ್ವಯವಾಗಲಿದೆ. ‘ಕೈಗಾರಿಕೆಗಳ ಬೆಳವಣಿಗೆ ಹಿತದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ. ಉದ್ಯಮಿಗಳು ಇದರ  ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.