ಬೆಂಗಳೂರು: ಸೋಮವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ.
ಮಂಕಿಯಲ್ಲಿ ಅತಿ ಹೆಚ್ಚು 16 ಸೆಂ.ಮೀ ಮಳೆಯಾಗಿದೆ. ಕದ್ರಾ, ಆಗುಂಬೆ 10, ಭಟ್ಕಳ, ಗೋಕರ್ಣ 8, ಬೆಳ್ತಂಗಡಿ, ಶಿರಾಲಿ 7, ಕೊಲ್ಲೂರು, ಸಿದ್ದಾಪುರ (ಉಡುಪಿ ಜಿಲ್ಲೆ), ಅಂಕೋಲಾ, ಲೋಂಡಾ 6, ಉಪ್ಪನಂಗಡಿ, ಕಾರ್ಕಳ, ಹೊನ್ನಾವರ, ಕುಮಟಾ, ಕಾರವಾರ 5, ಮಂಗಳೂರು ವಿಮಾನ ನಿಲ್ದಾಣ, ಕೋಟ, ಗೇರುಸೊಪ್ಪ, ಯಲ್ಲಾಪುರ, ಲಿಂಗನಮಕ್ಕಿ, ತೀರ್ಥಹಳ್ಳಿ 4, ಪುತ್ತೂರು, ಸುಬ್ರಹ್ಮಣ್ಯ, ಉಡುಪಿ, ಕುಂದಾಪುರ, ಖಾನಾಪುರ, ತಾಳಗುಪ್ಪ, ಕಮ್ಮರಡಿ 3, ಮುಲ್ಕಿ, ಸಾಗರ, ಮಾಣಿ, ಧರ್ಮಸ್ಥಳ, ಸುಳ್ಯ, ಶಿರಸಿ, ಶೃಂಗೇರಿ 2, ಮಂಗಳೂರು, ಬನವಾಸಿ, ಕಿರವತ್ತಿ, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ), ಹಾವೇರಿ, ಜೇವರ್ಗಿ, ಭಾಗಮಂಡಲ, ಹೊಸನಗರ, ಹುಂಚದಕಟ್ಟೆ, ಶಿಕಾರಿಪುರ, ಆನವಟ್ಟಿ, ಜಯಪುರ, ಹಾಸನ, ಹೊನ್ನಾಳಿ 1 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಸೇರಿ ದಕ್ಷಿಣ ಒಳನಾಡಿನ ಪಶ್ಚಿಮ ಘಟ್ಟಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.