ADVERTISEMENT

ಮಂಗಳೂರಿನ ಎರಡು ಹಡಗು ಮುಳುಗಡೆ

ಲಕ್ಷದ್ವೀಪದ ಬಳಿ ಹೆಚ್ಚಿದ ಒಖಿ ಅಬ್ಬರ: ಭಾರೀ ಗಾಳಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:57 IST
Last Updated 1 ಡಿಸೆಂಬರ್ 2017, 19:57 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಮಂಗಳೂರು: ಒಖಿ ಪ್ರಭಾವ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದು, ಮಂಗಳೂರಿನ ಹಳೆಯ ಬಂದರಿನಿಂದ ಸರಕು ಹೊತ್ತು ಸಾಗುತ್ತಿದ್ದ ಎರಡು ಹಡಗುಗಳು ಲಕ್ಷ ದ್ವೀಪದ ಕವರತ್ತಿ ಬಳಿ ಮುಳುಗಿವೆ. ಇನ್ನೊಂದು ಹಡಗೂ ಅಪಾಯದ ಭೀತಿಯಲ್ಲಿದೆ.

ಈ ಬಗ್ಗೆ ಲಕ್ಷದ್ವೀಪದ ಆಡಳಿತದಿಂದ ಮಾಹಿತಿ ಕೇಳಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಹಡಗಿನಲ್ಲಿದ್ದ ಒಟ್ಟು 14 ಜನ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಈಗಾಗಲೇ ಕರಾವಳಿ ಕಾವಲು ಪಡೆಯಿಂದ ಲಕ್ಷದ್ವೀಪದ ಆಡಳಿತಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ತರಕಾರಿ, ಹಣ್ಣು, ದಿನಸಿ ಸಾಮಗ್ರಿಗಳನ್ನು ಈ ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಈ ಹಡಗುಗಳು ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಿದ್ದವು ಎಂದು ತಿಳಿದು ಬಂದಿದೆ. ಇದೀಗ ನೌಕಾಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಹಡಗಿನಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.