ADVERTISEMENT

ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್‌ ಆರಂಭ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಮಂಡ್ಯದ ಅಶೋಕನಗರದಲ್ಲಿ ರಮ್ಯಾ ಕ್ಯಾಂಟೀನ್ ಭಾನುವಾರ ಆರಂಭಗೊಂಡಿತು
ಮಂಡ್ಯದ ಅಶೋಕನಗರದಲ್ಲಿ ರಮ್ಯಾ ಕ್ಯಾಂಟೀನ್ ಭಾನುವಾರ ಆರಂಭಗೊಂಡಿತು   

ಮಂಡ್ಯ: ಇಲ್ಲಿನ ಅಶೋಕನಗರದಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಬಳಿ ನೂತನವಾಗಿ ರಮ್ಯಾ ಕ್ಯಾಂಟೀನ್‌ ಆರಂಭಿಸಲಾಗಿದ್ದು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಅವರು ಭಾನುವಾರ ಉದ್ಘಾಟಿಸಿದರು.

ಮಾಜಿ ಸಂಸದೆ ರಮ್ಯಾ ಬೆಂಬಲಿಗರಾದ ರಘು ಈ ಕ್ಯಾಂಟೀನ್‌ ತೆರೆದಿದ್ದಾರೆ. ಯಾವುದೇ ತಿಂಡಿ, ಊಟಕ್ಕೆ ₹ 10 ದರ ನಿಗದಿಪಡಿಸಲಾಗಿದೆ.

ಇತರೆ ಕ್ಯಾಂಟೀನ್‌ಗಳಿಗಿಂತ ಇದು ಭಿನ್ನವಾಗಿದೆ. ಕುಡಿಯಲು ಬಿಸಿನೀರು ಕೊಡಲಾಗುವುದು. ತಿಂಡಿ ಹಾಗೂ ಊಟದ ಪಾರ್ಸೆಲ್ ತೆಗೆದುಕೊಂಡರೆ ಹೆಚ್ಚುವರಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ.

ADVERTISEMENT

ಬೆಳಗಿನ ತಿಂಡಿಯಲ್ಲಿ ಮಸಾಲೆ ದೋಸೆ, ಪ್ಲೇನ್‌ ದೋಸೆ,  ಈರುಳ್ಳಿ ದೋಸೆ, ಸೆಟ್‌ ದೋಸೆ, ಇಡ್ಲಿ, ಮಸಾಲೆ ವಡೆ, ರೈಸ್‌ ಬಾತ್‌, ಪೂರಿ, ಉದ್ದಿನ ವಡೆ, ಚಪಾತಿ, ಚಿತ್ರಾನ್ನ ಲಭ್ಯವಿದೆ.

ಮಧ್ಯಾಹ್ನದ ಊಟಕ್ಕೆ ಚಪಾತಿ, ಮುದ್ದೆ, ಅನ್ನ ಸಾಂಬಾರು, ತಿಳಿಸಾಂಬಾರು ಅನ್ನ, ಮೊಸರನ್ನ, ರವೆಗಂಜಿ ದೊರೆಯುತ್ತದೆ.

ಮೊದಲ ದಿನದಂದು ಎಲ್ಲರಿಗೂ ಉಚಿತವಾಗಿ ತಿಂಡಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.