ADVERTISEMENT

ಮತದಾನಕ್ಕೆ ತೆರಳಿತ್ತಿದ್ದಾಗ ಅಪಘಾತ; ನಾಲ್ಕು ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಬೇಲೂರು– ಹಾಸನ ಹೆದ್ದಾರಿಯಲ್ಲಿ ಚಿಲ್ಕೂರು ಬಳಿ ಆಟೊ– ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟರು
ಬೇಲೂರು– ಹಾಸನ ಹೆದ್ದಾರಿಯಲ್ಲಿ ಚಿಲ್ಕೂರು ಬಳಿ ಆಟೊ– ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟರು   

ಬೇಲೂರು: ಬೇಲೂರು ತಾಲ್ಲೂಕಿನ ರಾಮೇನಹಳ್ಳಿ ಗ್ರಾಮಸ್ಥರು ಶನಿವಾರ ಮತದಾನ ಮಾಡಲು ಹತ್ತಿರದ ಚಿಲ್ಕೂರು ಮತಗಟ್ಟೆಗೆ ಆಟೊದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.

ಹಾಸನ ಕಡೆಯಿಂದ ಬಂದ ಲಾರಿ ಆಟೊಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಾರದಮ್ಮ (70), ಕಮಲಮ್ಮ (65), ಜಯಲಕ್ಷ್ಮಿ (45) ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿದ್ದ ಲಕ್ಷ್ಮೇಗೌಡ (65) ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT