
ಇಂದು (ಮೇ 16) 16ನೇ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ದಿನ. 67 ವರ್ಷಗಳ ಇತಿಹಾಸ ಇರುವ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ‘ಪ್ರಜಾವಾಣಿ’ ವಿಶ್ವಾಸಾರ್ಹ, ಗುಣಮಟ್ಟದ ಸುದ್ದಿಗಳನ್ನು ನೀಡುವಲ್ಲಿ ಸದಾ ಮುಂದು.
ಈ ಬಾರಿಯೂ ಓದುಗರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಫಲಿತಾಂಶದ ವೈವಿಧ್ಯಮಯ ಸುದ್ದಿಗಳು, ತಜ್ಞರ ವಿಶ್ಲೇಷಣೆಗಳನ್ನು ವರ್ಣಮಯ ವಿನ್ಯಾಸದೊಂದಿಗೆ ಪತ್ರಿಕೆ ಪ್ರಸ್ತುತಪಡಿಸಲಿದೆ.
ಇತಿಹಾಸಕಾರ ರಾಮಚಂದ್ರ ಗುಹಾ, ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ, ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ, ಉದ್ಯಮಿ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಪತ್ರಕರ್ತರಾದ ಮದನ ಮೋಹನ, ಬೇಳೂರು ಸುದರ್ಶನ, ಲೇಖಕಿ ಪ್ರತಿಭಾ ನಂದಕುಮಾರ್, ಅನಿವಾಸಿ ಭಾರತೀಯ ಸುಧೀಂದ್ರ ಬುದ್ಯ ಮತ್ತಿತರರ ವಿಶ್ಲೇಷಣಾತ್ಮಕ ಲೇಖನಗಳು ಶನಿವಾರದ ಸಂಚಿಕೆಯ ವಿಶೇಷ.
ಪ್ರತಿಷ್ಠಿತ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ಹಾಗೂ ವಿಭಜನೆಯ ಹೊಸ್ತಿಲಲ್ಲಿ ಇರುವ ತೆಲಂಗಾಣ, ಸೀಮಾಂಧ್ರದಲ್ಲಿ ಸಂಚರಿಸಿ ಸಾಕ್ಷಾತ್ ಸಮೀಕ್ಷೆ ನಡೆಸಿದ್ದ ನಮ್ಮ ಹಿರಿಯ ಪ್ರತಿನಿಧಿ ಹೊನಕೆರೆ ನಂಜುಂಡೇಗೌಡ,ಎನ್. ಉದಯ್ ಕುಮಾರ್ ಹಾಗೂ ರವೀಂದ್ರ ಭಟ್ಟ ಅವರ ಚುನಾವಣೋತ್ತರ ಸಮೀಕ್ಷೆಗಳೂ ಪ್ರಕಟವಾಗಲಿವೆ.
– ಸಂಪಾದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.