ADVERTISEMENT

ಮಹಿಮ ಪಟೇಲ್‌ ಜೆಡಿಎಸ್‌ಗೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ದಾವಣಗೆರೆ: ಮಾಜಿ ಶಾಸಕ ಮಹಿಮ ಪಟೇಲ್‌ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಲಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಅವರು ಕಣಕ್ಕೆ ಇಳಿಯು­ವುದು ಖಚಿತವಾಗಿದೆ.

‘ಬೆಂಗಳೂರಿನಲ್ಲಿ ಮಾರ್ಚ್‌ 21ರಂದು ಕುಮಾರಸ್ವಾಮಿ, ದೇವೇ­ಗೌಡ ಹಾಗೂ ಮಹಿಮ ಪರಸ್ಪರ ಚರ್ಚಿಸಲಿದ್ದು, ಅಂದೇ ಜೆಡಿಎಸ್ ಸೇರಲಿದ್ದಾರೆ. ಪಕ್ಷ ಅವರಿಗೆ ‘ಬಿ’ ಫಾರಂ ನೀಡಲಿದ್ದು, ದಾವಣಗೆರೆ­ಯಿಂದ ಸ್ಪರ್ಧಿ­ಸು­ವುದು ಖಚಿತ’ ಎಂದು ಜೆಡಿಎಸ್‌ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.­ಗುಡ್ಡಪ್ಪ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.