ಶಹಾಬಾದ (ಕಲಬುರ್ಗಿ ಜಿಲ್ಲೆ): ಇಲ್ಲಿಗೆ ಸಮೀಪದ ಹೊನಗುಂಟ ಗ್ರಾಮದಲ್ಲಿ ಶನಿವಾರ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಾದ ಮಲ್ಲು ಹಾಬನೋರ (15), ನಾಗರಾಜ ಹಾಬನೋರ (12) ಗಾಯಗೊಂಡಿದ್ದಾರೆ.
ಆಟವಾಡುವ ಸಲುವಾಗಿ ಮನೆಯಲ್ಲಿ ಮೊಬೈಲ್ನ ಬ್ಯಾಟರಿ ಬಿಚ್ಚಿ ಅದಕ್ಕೆ ಚಿಕ್ಕ ಬಲ್ಬ್ನ ಸಂಪರ್ಕ ಕೊಡುತ್ತಿದ್ದರು. ಆಗ ಬ್ಯಾಟರಿ ಸ್ಫೋಟಗೊಂಡಿದೆ. ಇದರಿಂದ ಮಲ್ಲುವಿನ ಬಲ ಕೈ ಹಾಗೂ ಎದೆ, ನಾಗರಾಜನ ಎಡಭಾಗದ ಕಣ್ಣಿಗೆ ಗಾಯವಾಗಿದೆ. ಮಲ್ಲುನನ್ನು ಶಹಾಬಾದ ಆಸ್ಪತ್ರೆಗೆ ಹಾಗೂ ನಾಗರಾಜನನ್ನು ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ನಾಗರಾಜನಿಗೆ ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ’ ಎಂದು ಬಸವೇಶ್ವರ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.