ADVERTISEMENT

ಯಡಿಯೂರಪ್ಪರಾಜ್ಯದ ಕಣ್ಮಣಿ- ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಕುಕನೂರು (ಕೊಪ್ಪಳ ಜಿ.): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಕಣ್ಮಣಿ. ಅವರ ಆಶೀರ್ವಾದದಿಂದ ನಾನೂ ಬಿ.ಜೆ.ಪಿ.ಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದೇನೆ. ನನ್ನ ಮಗ ಶಿವರಾಜ್‌ಗೌಡ, ಯಡಿಯೂರಪ್ಪ  ಅವರ ಅಭಿಮಾನಿ ಆಗಿರುವುದರಿಂದ ಕೆ.ಜೆ.ಪಿ ಜೊತೆಯಲ್ಲಿ ಗುರುತಿಸಿಕೊಂಡಿರಬಹುದು ಎಂದು ಸಂಸತ್ ಸದಸ್ಯ ಎಸ್.ಶಿವರಾಮಗೌಡ ಹೇಳಿದರು.

ಶನಿವಾರ ಇಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದವರು, ನಾನು ಬಿ.ಜೆ.ಪಿ. ಚಿಹ್ನೆಯಲ್ಲಿ ಆಯ್ಕೆ ಆಗಿದ್ದು, ಮುಂದೆಯೂ ಬಿ.ಜೆ.ಪಿಯಲ್ಲೇ  ಇರುತ್ತೇನೆ. ಕೆ.ಜೆ.ಪಿ ಜೊತೆ ಗುರುತಿಸಿಕೊಂಡಿರುವ ಮಗನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.