ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಮಂಡಳಿಯ ಉಪಾಧ್ಯಕ್ಷರಾಗಿರುತ್ತಾರೆ.
ಚಾಮರಾಜನಗರ ಜಿಲ್ಲೆಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ನ ಅಧ್ಯಕ್ಷ ಜಿ. ಮಲ್ಲೇಶಪ್ಪ, ದಕ್ಷಿಣ ಕನ್ನಡದ ನಿಸರ್ಗ ಅಪೇಕ್ಷಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನೀರಜ್ ನಿರ್ಮಲ್, ಮೈಸೂರಿನ ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನದ ಡಾ.ಎಂ.ಡಿ. ಮಧುಸೂದನ್ ಅವರು ಎನ್ಜಿಒ ಸದಸ್ಯರಾಗಿರುತ್ತಾರೆ.
ಹಿರಿಯ ಪರಿಸರವಾದಿಗಳಾದ ಅಜಯ್ ಎ. ದೇಸಾಯಿ, ಸಂಜಯ್ ಗುಬ್ಬಿ, ಎಂ.ಕೆ. ಭಾಸ್ಕರ ರಾವ್, ಶರತ್ ಚಂಪತಿ, ಡಾ.ಎನ್.ಆರ್. ಸೂರ್ಯ, ಪಿ.ಎಂ. ಸುಬ್ರು, ರಾಣಾ ಜಾರ್ಜ್ (ಗೃಹ ಸಚಿವ ಕೆ.ಜೆ.ಜಾರ್ಜ್ ಪುತ್ರ), ಜೋಸೆಫ್ ಹೂವರ್, ಡಾ.ಸಿ. ಮಾದೇಗೌಡ, ಡಾ.ಎನ್.ಸಿ. ಶಿವಪ್ರಕಾಶ್ ಅವರೂ ಮಂಡಳಿಯ ಸದಸ್ಯರಾಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.