ADVERTISEMENT

ವನಮಾಲಾ ಲೇಖಕಿಯರ ಸಂಘದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ವನಮಾಲಾ ಸಂಪನ್ನಕುಮಾರ್
ವನಮಾಲಾ ಸಂಪನ್ನಕುಮಾರ್   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ವನಮಾಲಾ ಸಂಪನ್ನ ಕುಮಾರ್‌ ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಆರ್‌.ಪೂರ್ಣಿಮಾ ಅವರನ್ನು 20 ಮತಗಳ ಅಂತರದಿಂದ ಸೋಲಿಸಿದರು.

ಒಟ್ಟು 379 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 198 ಮತಗಳು ವನಮಾಲಾ ಅವರಿಗೂ, 178 ಮತಗಳು ಪೂರ್ಣಿಮಾ ಅವರಿಗೆ ಲಭಿಸಿವೆ. ಮೂರು ಮತಗಳು ಅಸಿಂಧುಗೊಂಡಿವೆ. ಅಂಜಲಿ ರಾಮಣ್ಣ ಚುನಾವಣಾಧಿಕಾರಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.