ADVERTISEMENT

ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿಎಚ್‌ಆರ್‌ಡಿ ವಿದ್ಯಾರ್ಥಿಯೊಬ್ಬ ಬುಧವಾರ ಮಧ್ಯಾಹ್ನ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.

ಕೋಲಾರ ಜಿಲ್ಲೆ ಮಾಲೂರು ಕೋಡಿಹಳ್ಳಿಯ ನಾರಾಯಣಪ್ಪ ಎಂಬುವವರ ಪುತ್ರನಾದ ಇಂದು ಕುಮಾರ್ (22) ಮೃತ ವಿದ್ಯಾರ್ಥಿ.

ಪಟ್ಟಣದ ಸಿಟಿ ಲೈಟ್ ಕಟ್ಟಡದಲ್ಲಿರುವ `ಆಳ್ವಾಸ್ ಹಾಸ್ಟೆಲ್~ನಲ್ಲಿ ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿಗೆಂದು ಕಟ್ಟಡದ 4ನೇ ಮಹಡಿ ಎದುರಿನ ಇಳಿಜಾರಾದ ಸ್ಲ್ಯಾಬ್‌ನಲ್ಲಿ ಕುಳಿತಿದ್ದಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.