ADVERTISEMENT

ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 8 ಮೇ 2018, 14:34 IST
Last Updated 8 ಮೇ 2018, 14:34 IST
ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ದುರ್ಮರಣ
ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ದುರ್ಮರಣ   

ಹುಬ್ಬಳ್ಳಿ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸುವ ಸಂದರ್ಭದಲ್ಲಿ ಹೆಸ್ಕಾಂನವರು ಏಕಾಏಕಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಇಬ್ಬರು ಕಾರ್ಮಿಕರು‌ ಸಾವಿಗೀಡಾದ ಹೃದಯವಿದ್ರಾವಕ‌ ಘಟನೆ ನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಮಂಗಳವಾರ ಸಂಜೆ ನಡೆದಿದೆ.

ತಾಲ್ಲೂಕಿನ ‌ಕರಡಿಕೊಪ್ಪ ಗ್ರಾಮದ ಸಂಗಪ್ಪ ಬಸಪ್ಪ ಸಿದ್ಲಿಂಗನವರ (29), ಮಹಾದೇವಪ್ಪ ಬಾಬಣ್ಣ ಬಾಬಣ್ಣವರ (28) ಸಾವಿಗೀಡಾದವರು.

ವಿದ್ಯುತ್ ಗ್ರಿಡ್‌ನಲ್ಲಿ ಟಿ.ಸಿ. ಅಳವಡಿಸುತ್ತಿದ್ದ ಇಬ್ಬರೂ ಗುತ್ತಿಗೆ ‌ಕಾರ್ಮಿಕರಾಗಿದ್ದರು. ಅವರು ಕಂಬ ಏರಿ ವೈರ್ ಜೋಡಿಸುವ ಕೆಲಸ ಮಾಡುವ ಬಗ್ಗೆ ಮಾಹಿತಿ ಇತ್ತಾದರೂ ಹೆಸ್ಕಾಂ ಸಿಬ್ಬಂದಿ ‌ನಿರ್ಲಕ್ಷ್ಯತನದಿಂದ ವಿದ್ಯುತ್ ಸಂಪರ್ಕ ನೀಡುವ ಮೂಲಕ‌ ಇಬ್ಬರು ಅಮಾಯಕರ ಜೀವ‌ ತೆಗೆದಿದ್ದಾರೆ ಎಂದು ಇದೇ ಕೆಲಸದಲ್ಲಿ ‌ತೊಡಗಿದ್ದ ಕಾರ್ಮಿಕ ‌ಬಸವರಾಜ ದೂರಿದರು.

ADVERTISEMENT

ಶವಗಳನ್ನು ‌ಕಿಮ್ಸ್ ಆಸ್ಪತ್ರೆಗೆ ‌ರವಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.