ಬೆಳಗಾವಿ: ನಗರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
ಊಟೋಪಚಾರ ಸಮಿತಿಯ ಅಧ್ಯಕ್ಷ ಸಂಸದ ರಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಏಕರೂಪ್ ಕೌರ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಉತ್ತರ ಕರ್ನಾಟಕದ ತಿಂಡಿ, ತಿನಿಸು, ಜತೆಗೆ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಊಟವನ್ನೂ ಸಹ ಒದಗಿಸಲು ತೀರ್ಮಾನಿಸಲಾಯಿತು. ಜೋಳ, ಸಜ್ಜಿ ರೊಟ್ಟಿ, ಚಪಾತಿ, ಗುರೆಳ್ಳು, ಶೇಂಗಾ ಹಿಂಡಿ, ಪುಟಾಣಿ ಚಟ್ನಿ, ಬದನೆಕಾಯಿ, ಹೆಸರುಕಾಳು ಪಲ್ಲೆ, ಮಡಕಿ ಉಸುಳಿ, ಅನ್ನ-ಸಾರು ಮಾಡಲಾಗುವುದು. ಗೋಧಿ ಹುಗ್ಗಿ, ಸಜ್ಜಕ ಹಾಗೂ ಜಿಲೇಬಿ ಸಿಹಿ ನೀಡಲಾಗುವುದು. ಉಪಹಾರಕ್ಕೆ ಉಪ್ಪಿಟ್ಟು, ಶಿರಾ ಅವಲಕ್ಕಿ ಹಾಗೂ ಮಂಡಳ ವಗ್ಗರಣಿ, ರಾತ್ರಿ ಊಟಕ್ಕೆ ಬಿಸಿ ಬೇಳೆ ಬಾತ್, ಪುಳಿಯೊಗರೆ ನೀಡಲು ಇಂದಿನ ನಿರ್ಣಯಿಸಲಾಯಿತು.
ಸಂಸದ ರಮೇಶ ಕತ್ತಿ ಮಾತನಾಡಿ, ಮಧ್ಯಾಹ್ನ ಒಂದೂವರೆ ಲಕ್ಷ ಜನರಿಗೆ ಹಾಗೂ ರಾತ್ರಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಏಳು ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.