ADVERTISEMENT

ವಿಷಾನಿಲ: ಇಬ್ಬರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST

ದಾವಣಗೆರೆ: ತಾಲ್ಲೂಕಿನ ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಯಂತ್ರ ದುರಸ್ತಿ ವೇಳೆ ವಿಷಾನಿಲ ಉಸಿರಾಡಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ.

ಕುಕ್ಕುವಾಡ ಗ್ರಾಮದ ಜಿ. ನಾಗರಾಜ್ (34), ಎಂ.ಕೆ. ನಾಗರಾಜ್ (26) ಮೃತ ಕಾರ್ಮಿಕರು. ತೀವ್ರ ಅಸ್ವಸ್ಥನಾದ ದಾವಣಗೆರೆಯ ಕಾರ್ಮಿಕ ರುದ್ರಪ್ಪ ಅವರಿಗೆ ನಗರದ ಎಸ್‌.ಎಸ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಖಾನೆಯ ನಾಲ್ವರು ಸಿವಿಲ್ ಕಾರ್ಮಿಕರು ಶುಕ್ರವಾರ ಸಂಜೆ ತ್ಯಾಜ್ಯ ಹೊರ ಹೋಗುವ ತೊಟ್ಟಿ ಸ್ವಚ್ಛತೆ ಮತ್ತು ಯಂತ್ರದ ದುರಸ್ತಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಷಾನಿಲ ಸೋರಿಕೆಯಾಗಿದ್ದು, ಅದನ್ನು ಸೇವಿಸಿದ ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. ಇವರ ರಕ್ಷಿಸಲು ಮುಂದಾದ ರುದ್ರಪ್ಪ ಕೂಡ ತೀವ್ರ ಅಸ್ವಸ್ಥರಾಗಿದ್ದಾರೆ. ಮತ್ತೊಬ್ಬ ಕಾರ್ಮಿಕನಿಗೆ ಯಾವುದೇ ಅನಾಹುತ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಹದಡಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತರ ಪೋಷಕರು ಬಾರದ ಕಾರಣ ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಶಾಸಕ ಶಾಮನೂರ ಶಿವಶಂಕರಪ್ಪ ಕುಟುಂಬದ ಒಡೆತನದ ಕಾರ್ಖಾನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.