ADVERTISEMENT

ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ಐವರ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 18:37 IST
Last Updated 13 ಏಪ್ರಿಲ್ 2018, 18:37 IST
ಕುರುಗೋಡು ಠಾಣಾ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ಬಳಿ, ಶುಕ್ರವಾರ ಬೆಳಗಿನಜಾವ ಅಪಾಘತಕ್ಕೀಡಾದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ತೆರುವುಗೊಳಿಸಿದರು
ಕುರುಗೋಡು ಠಾಣಾ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ಬಳಿ, ಶುಕ್ರವಾರ ಬೆಳಗಿನಜಾವ ಅಪಾಘತಕ್ಕೀಡಾದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ತೆರುವುಗೊಳಿಸಿದರು   

ಕುರುಗೋಡು (ಬಳ್ಳಾರಿ ಜಿಲ್ಲೆ): ಇಲ್ಲಿಯ ಭಾಗ್ಯನಗರ ಕ್ಯಾಂಪ್‌ ಬಳಿ, ಚಾಲಕನ ನಿಯಂತ್ರಣ ತ‍ಪ್ಪಿದ ಕಾರೊಂದು ರಸ್ತೆ ಪಕ್ಕದ ಸೇತುವೆಗೆ ಡಿಕ್ಕಿಯಾಗಿದ್ದರಿಂದ ವೈದ್ಯ ದಂಪತಿ ಸೇರಿದಂತೆ ಐವರು ಶುಕ್ರವಾರ ಮೃತಪಟ್ಟಿದ್ದಾರೆ.

ಮೃತಪಟ್ಟವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದವರು.

ಡಾ. ಸಂತೋಷ್ (36), ಡಾ. ಅರ್ಚನಾ (34), ಪುತ್ರಿ  ಲಕ್ಷ್ಮಿ (1) ಹಾಗೂ ಸಂತೋಷ್‌ ಅವರ ತಂದೆ ಸಿದ್ದರಾಮಪ್ಪ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಲೀಲಾವತಿ, ಚಿಕಿತ್ಸೆಗೆ ಸ್ಪಂದಿಸದೇ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಅಸುನೀಗಿದರು. ಇನ್ನೊಬ್ಬ ಪುತ್ರ ತನುಷ್‌ಗೆ (3) ಗಾಯಗಳಾಗಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.