ಕಾರವಾರ: ಕುಮಟಾ- ತಡಸ ರಾಜ್ಯ ಹೆದ್ದಾರಿ-69ರಲ್ಲಿ ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟ ಪ್ರದೇಶದ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಸಲುವಾಗಿ ಇದೇ ತಿಂಗಳ 31ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ
ಈ ರಸ್ತೆ ಬದಲಿಗೆ ಪರ್ಯಾಯ ರಸ್ತೆಗಳಲ್ಲಿ ವಾಹನಗಳು ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಇಮ್ಕೊಂಗ್ಲಾ ಜಮೀರ್ ಆದೇಶಿಸಿದ್ದಾರೆ. ಹುಬ್ಬಳ್ಳಿಯಿಂದ ಯಲ್ಲಾಪುರ ಅಥವಾ ಮುಂಡಗೋಡ ಮಾರ್ಗದ ಮೂಲಕ ಶಿರಸಿಗೆ ಬಂದು ಕುಮಟಾ ಮಾರ್ಗವಾಗಿ ಉಡುಪಿ-ಧರ್ಮಸ್ಥಳ-ಮಂಗಳೂರು ಕಡೆಗೆ ಹೋಗುವ ಹಾಗೂ ಬರುವ ಬಸ್ಸು, ಭಾರಿ ವಾಹನಗಳು ಸಿದ್ದಾಪುರ- ಮಾವಿನಗುಂಡಿ ಹೊನ್ನಾವರ ಮೂಲಕ ಚಲಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.