ADVERTISEMENT

ಸಮ್ಮೇಳನಕ್ಕೆ ಆಗಮಿಸಿದ ಮಹಾತ್ಮ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 17:30 IST
Last Updated 4 ಫೆಬ್ರುವರಿ 2011, 17:30 IST

ಮಹಾತ್ಮ ಗಾಂಧೀಜಿ ಅವರ ವೇಷ ಧರಿಸಿದ್ದ ಬ್ಯಾಗಡಿಹಳ್ಳಿ ಬಸವರಾಜು ಅವರು ಸಭಾಂಗಣದ ಅಕ್ಕಪಕ್ಕದಲ್ಲಿದ್ದ ಮಕ್ಕಳ, ಯುವಕರ ಗಮನ ಸೆಳೆದರು.

‘ನಾನು ಕಳೆದ 20 ವರ್ಷಗಳಿಂದ ರಾಷ್ಟ್ರದ ವಿವಿಧ ನಾಯಕರ ವೇಷ ಧರಿಸುತ್ತಿದ್ದೇನೆ. ಅಲ್ಲದೆ ಸಾಹಿತಿಗಳ ವೇಷವನ್ನೂ ಧರಿಸಿದ್ದೇನೆ. ಸ್ವಯಂಪ್ರೇರಣೆಯಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಖಾಸಗಿ ಶಾಲೆಯೊಂದರಲ್ಲಿ ಅವರು ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.