ಮಹಾತ್ಮ ಗಾಂಧೀಜಿ ಅವರ ವೇಷ ಧರಿಸಿದ್ದ ಬ್ಯಾಗಡಿಹಳ್ಳಿ ಬಸವರಾಜು ಅವರು ಸಭಾಂಗಣದ ಅಕ್ಕಪಕ್ಕದಲ್ಲಿದ್ದ ಮಕ್ಕಳ, ಯುವಕರ ಗಮನ ಸೆಳೆದರು.
‘ನಾನು ಕಳೆದ 20 ವರ್ಷಗಳಿಂದ ರಾಷ್ಟ್ರದ ವಿವಿಧ ನಾಯಕರ ವೇಷ ಧರಿಸುತ್ತಿದ್ದೇನೆ. ಅಲ್ಲದೆ ಸಾಹಿತಿಗಳ ವೇಷವನ್ನೂ ಧರಿಸಿದ್ದೇನೆ. ಸ್ವಯಂಪ್ರೇರಣೆಯಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಅವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಖಾಸಗಿ ಶಾಲೆಯೊಂದರಲ್ಲಿ ಅವರು ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.