ADVERTISEMENT

ಸರ್ವಾಧಿಕಾರಿಗಳಾಗಲು ಓಡಾಡುತ್ತಿರುವ ಕೋಮುವಾದಿಗಳಿಗೆ ಕಡಿವಾಣ ಹಾಕಬೇಕು: ಪ್ರಕಾಶ್‌ ರೈ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 14:34 IST
Last Updated 9 ಏಪ್ರಿಲ್ 2018, 14:34 IST
ಸರ್ವಾಧಿಕಾರಿಗಳಾಗಲು ಓಡಾಡುತ್ತಿರುವ ಕೋಮುವಾದಿಗಳಿಗೆ ಕಡಿವಾಣ ಹಾಕಬೇಕು: ಪ್ರಕಾಶ್‌ ರೈ
ಸರ್ವಾಧಿಕಾರಿಗಳಾಗಲು ಓಡಾಡುತ್ತಿರುವ ಕೋಮುವಾದಿಗಳಿಗೆ ಕಡಿವಾಣ ಹಾಕಬೇಕು: ಪ್ರಕಾಶ್‌ ರೈ   

ಬೆಂಗಳೂರು: ಕೋಮುವಾದಿಗಳು ಸರ್ವಾಧಿಕಾರಿಗಳಾಗುತ್ತೇವೆ ಎಂದು ಓಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಮೂಲಕ ಭಾರತವನ್ನು ಸೌಹಾರ್ದಯುತ, ಪ್ರೀತಿಯುತ ದೇಶವನ್ನಾಗಿ ಮಾಡಬೇಕು ಎಂದು ನಟ ಪ್ರಕಾಶ ರೈ ಹೇಳಿದರು.

ಸ್ವಾತಂತ್ಯ ಸೇನಾನಿ ಎಚ್‌.ಎಸ್‌. ದೊರೆಸ್ವಾಮಿ ಶತಮಾನೋತ್ಸವ ಸಮಿತಿ ನಗರದಲ್ಲಿ ಆಯೋಜಿಸಿದ್ದ ‘ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಸಮುದ್ರ, ಶಿಖರ, ಜೀವನದಿ ಮುಂದೆ ನಿಂತರೆ ನನಗೆ ಮಾತು ಬರುವುದಿಲ್ಲ. ದೊರೆಸ್ವಾಮಿ ಅವರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಅವರ ವಯಸ್ಸಿನ ಅರ್ಧದಷ್ಟು ವಯಸ್ಸು ನನಗೆ ಆಗಿದೆ ಎಂದರು.

ADVERTISEMENT

ಬಂಡೀಪುರಕ್ಕೆ ಹೋಗಿದ್ದಾಗ ದೊಡ್ಡ ಸಂಪಿಗೆ ಮರ ನೋಡಿದ್ದೆ. ಆ ಮರ ತನ್ನ ಬದುಕಿನಲ್ಲಿ ಎಷ್ಟೆಲ್ಲಾ ವಸಂತ, ಮಳೆಯನ್ನು ನೋಡಿದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿರುತ್ತದೆ ಎಂಬ ಯೋಚನಾ ಲಹರಿಗೆ ಜಾರಿದ್ದೆ. ಮರದ ಕೆಳಗೆ ಹೋದರೆ ತಾಯಿಯ ಮಡಿಲಿನಂತಹ ಸಾಂತ್ವನ ಸಿಗುತ್ತದೆ. ನಂಬಿಕೆ, ವಿಶ್ವಾಸ ಸಿಗುತ್ತದೆ. ಅದೇ ರೀತಿ ದೊರೆಸ್ವಾಮಿ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.