ADVERTISEMENT

ಸಿರಿಗೆರೆ ಮಠ: ನೀತಿ ಸಂಹಿತೆ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಚಿತ್ರದುರ್ಗ: ಚುನಾವಣೆ ಸಂದರ್ಭ­ದಲ್ಲಿ­ ರಾಜ­ಕಾರ­ಣಿಗಳು ಮಠಾಧೀ­ಶರ ಆಶೀರ್ವಾದ ಪಡೆಯಲು ಮಠ ಮಾನ್ಯ­­ಗಳಿಗೆ ಎಡತಾಕುವುದು ಸಾಮಾನ್ಯ. ಆಶೀರ್ವಾದ ಪಡೆಯಲು ಬಂದು ಸ್ವಾಮೀಜಿ ಜತೆ ಫೋಟೊ ಕ್ಲಿಕ್ಕಿಸಿ­ಕೊಂಡು ಅದನ್ನು ಚುನಾವಣಾ ಪ್ರಚಾ­­ರಕ್ಕೆ ಬಳಸಿಕೊಂಡು ‘ಸ್ವಾಮೀಜಿ ನಮ್ಮ ಪರ ಇದ್ದಾರೆ’ ಎಂದು ಬಿಂಬಿಸಿ­­ಕೊಳ್ಳು­­­ವುದುರಾಜಕಾರಣಿಗಳ ತಂತ್ರ.

ರಾಜಕಾರಣಿಗಳ ಇಂತಹ ತಂತ್ರಕ್ಕೆ ಸಿರಿಗೆರೆ ಮಠದ ತರಳಬಾಳು ಡಾ.ಶಿವ­ಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ಬಂಧ ಹೇರಿದ್ದಾರೆ.
‘ಯಾವ ಪಕ್ಷದ ಅಭ್ಯರ್ಥಿಗಳೇ ಆಗಲಿ. ಸಾಮಾನ್ಯ ಭಕ್ತರಂತೆ ಬಂದು ಆಶೀರ್ವಾದ ಪಡೆಯಲು ನನ್ನ ಅಭ್ಯಂತ­ರ­ವಿಲ್ಲ. ಆದರೆ, ಈ ಸಂದರ್ಭ­ದಲ್ಲಿ ಫೋಟೊ ತೆಗೆ­ಯು­ವುದು ಅಥವಾ ತೆಗೆದ ಫೋಟೊ­ಗಳನ್ನು ಪತ್ರಿಕೆ­­ಗಳಲ್ಲಿ ಹಾಕಿ­ಸು­ವುದು, ಸಾಮಾ­­ಜಿಕ­ ಜಾಲ ತಾಣ­ಗ­ಳಲ್ಲಿ ಬಿತ್ತರಿಸು­ವುದು, ಸ್ವಾಮೀಜಿ ನಮ್ಮ ಪರ ಇದ್ದಾರೆ ಎನ್ನುವ ರೀತಿ­ಯಲ್ಲಿ ದುರು­­ಪ­ಯೋಗ ಪಡಿಸಿ­ಕೊಳ್ಳು­ವುದನ್ನು ಮಾಡಬಾರದು’ ಎಂದು ಚುನಾ­­ವಣೆಯ ಸಂದರ್ಭದಲ್ಲಿ ಮಠಕ್ಕೆ ಬರುವ ರಾಜಕಾರಣಿಗಳಿಗೆ ಸ್ವಾಮೀಜಿ ತಾಕೀತು ಮಾಡಿದ್ದಾರೆ.

ಹೀಗೆ ಮಠದ ಒಳಗೆ ನೀತಿ ಸಂಹಿತೆ ಜಾರಿ ಮಾಡುವ ಮೂಲಕ ಸಿರಿಗೆರೆ ಸ್ವಾಮೀಜಿ ರಾಜಕಾರಣಿಗಳಿಗೆ ಹೊಸ ನೀತಿ ಪಾಠ ಬೋಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.