ADVERTISEMENT

ಹವಾಮಾನ ವರದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಹೆಚ್ಚು ಮಳೆ ನಿರೀಕ್ಷೆ
ಬೆಂಗಳೂರು:
ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ರಾಜ್ಯದ ಒಳನಾಡಿನಲ್ಲಿ ಮಳೆಯಾಗಿದೆ.

ಭಾಗಮಂಡಲದಲ್ಲಿ ಅತಿ ಹೆಚ್ಚು 13 ಸೆಂ.ಮೀ ಮಳೆಯಾಗಿದೆ. ಯಲ್ಲಾಪುರ 10, ಉಪ್ಪಿನಂಗಡಿ, ಕದ್ರಾ, ಕೊಟ್ಟಿಗೆಹಾರ 9, ಕಮ್ಮರಡಿ 7, ಪುತ್ತೂರು, ಬಂಟ್ವಾಳ, ಲಿಂಗನಮಕ್ಕಿ 6, ಮಾಣಿ, ಕೊಲ್ಲೂರು 5, ಬೆಳ್ತಂಗಡಿ, ಧರ್ಮಸ್ಥಳ, ನಿಲ್ಕುಂದ, ಮಂಚಿಕೇರಿ, ಖಾನಾಪುರ, ನಾಪೊಕ್ಲು, ಹೊಸನಗರ, ಆಗುಂಬೆ 4, 

ಗೇರುಸೊಪ್ಪ, ಜೋಯಿಡಾ, ಮುಂಡಗೋಡ, ಸುಬ್ರಹ್ಮಣ್ಯ, ಸಾಗರ, ಹುಂಚದಕಟ್ಟೆ, ಸಕಲೇಶಪುರ, ಕಳಸ 3, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಮೂಡಬಿದಿರೆ, ಕಾರ್ಕಳ, ಅಂಕೋಲಾ, ಕಿರವತ್ತಿ, ಸಿದ್ದಾಪುರ, ಹಾನಗಲ್, ಸೇಡಂ, ಮಾದಾಪುರ, ಸೋಮವಾರಪೇಟೆ, ಶೃಂಗೇರಿ, ಕೊಪ್ಪ 2, ಮೂಲ್ಕಿ, ಸುಳ್ಯ, ಹಳಿಯಾಳ, ಭಟ್ಕಳ, ಬನವಾಸಿ, ಸಂಕೇಶ್ವರ, ನಿಪ್ಪಾಣಿ, ಕಿತ್ತೂರು, ಕಾರವಾರ, ಬೆಳಗಾವಿ ವಿಮಾನ ನಿಲ್ದಾಣ, ಔರಾದ್, ಶಿಗ್ಗಾವಿ, ತ್ಯಾಗರ್ತಿ, ಅರಸಾಳು, ತೀರ್ಥಹಳ್ಳಿ, ಎನ್.ಆರ್.ಪುರ, ಬಾಳೆಹೊನ್ನೂರು, ಮೂರ್ನಾಡು, ವಿರಾಜಪೇಟೆ, ಎಚ್. ಡಿ.ಕೋಟೆಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯಿಂದ ಪಶ್ಚಿಮಾಭಿಮುಖವಾಗಿ 45 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.