ADVERTISEMENT

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ‌ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿಗೆ ಜೀವ ಬೆದರಿಕೆ ಹಾಕಿದ ಪ್ರದೀಪ್ ಶೆಟ್ಟರ್?

​ಪ್ರಜಾವಾಣಿ ವಾರ್ತೆ
Published 14 ಮೇ 2018, 16:19 IST
Last Updated 14 ಮೇ 2018, 16:19 IST
ಗೋಪಾಲ ಕುಲಕರ್ಣಿ
ಗೋಪಾಲ ಕುಲಕರ್ಣಿ   

ಹುಬ್ಬಳ್ಳಿ: ವಿಧಾನಸಭೆ ವಿರೋಧ ‌ಪಕ್ಷದ ನಾಯಕ ಜಗದೀಶ್ ‌ಶೆಟ್ಟರ್‌ ಸಹೋದರ ಪ್ರದೀಪ‌ ಶೆಟ್ಟರ್ ‌ಜೀವ‌ ಬೆದರಿಕೆ ‌ಹಾಕಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ‌ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧದ ಮೊಬೈಲ್ ಧ್ವನಿಮುದ್ರಿಕೆಯನ್ನು ಅಶೋಕ ನಗರ ಪೊಲೀಸರಿಗೆ ಹಾಜರುಪಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಹೇಶ ನಾಲವಾಡ ಅವರಿಂದ ಎಷ್ಟು ರೊಕ್ಕಾ ತಗೊಂಡಿದ್ದಿಯಾ? ಎಂದು ಪ್ರದೀಪ‌ ಶೆಟ್ಟರ್ ‌ಧ್ವನಿ ಹೋಲುವ ವ್ಯಕ್ತಿ ‌ಪ್ರಶ್ನಿಸುತ್ತಾರೆ. ಮತದಾನದ ದಿನವಾದ ‌ಶನಿವಾರ ಹೊರಗೆ ‌ಬರಬೇಡ. ಬಂದರೆ ನೀನು ಹಾಳಾಗಿ ಹೋಗುತ್ತೀಯಾ ಎಂದು ‌ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.