ADVERTISEMENT

ಹೈಟೆನ್ಷನ್‌ ವಿದ್ಯುತ್‌ ಕಾಮಗಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು–ಕೇರಳದ ಕೊಯಿಕ್ಕೋಡ್‌ ಹೈಟೆ­ನ್ಷನ್‌ ವಿದ್ಯುತ್‌ ಮಾರ್ಗದ ಕಾಮಗಾರಿ ಸ್ಥಗಿತಗೊಳಿಸಲು ಕಾವೇರಿ ಸೇನೆ ಹಾಗೂ ಬಸವಣ್ಣ ದೇವರ ಬನ ಸಂರ­ಕ್ಷಣಾ ಟ್ರಸ್ಟ್‌ ಪದಾಧಿ­ಕಾರಿಗಳು ಆಗ್ರಹಿಸಿದರು.

ವಿ­ರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ದೇವಮಚ್ಚಿ ಸಂರ­ಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯು­ತ್ತಿರುವ ಕಾಮ­ಗಾರಿಯ ಸ್ಥಳಕ್ಕೆ ಸೋಮ­ವಾರ ಭೇಟಿ ನೀಡಿದ ಸಂಘ­ಟನೆಯ ಪ್ರಮುಖರು, ಪವರ್‌ ಗ್ರೀಡ್‌ ಸಂಸ್ಥೆಯ ವಿರುದ್ಧ ಹರಿಹಾಯ್ದರು.

ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್‌ ಅಧ್ಯಕ್ಷ ಡಾ.ಬಿ.ಸಿ. ನಂಜಪ್ಪ ಮಾತ­ನಾಡಿ, ಕೊಡಗಿನ ಅರಣ್ಯ ಪ್ರದೇಶ­ವನ್ನು ಲೂಟಿ ಮಾಡುವ ಉದ್ದೇಶ­ದಿಂದ  ವಿದ್ಯುತ್‌ ಕಾಮಗಾರಿ ಆರಂಭಿಸ­ಲಾಗಿದೆ. ಕಾಮಗಾರಿ ಅನು­ಷ್ಠಾನಕ್ಕಾಗಿ ಲಕ್ಷಾಂ­ತರ ಮರ­ಗಳನ್ನು ಕಡಿಯ­ಲಾಗು­ತ್ತಿದೆ. ಇದರಿಂದ ಕಾವೇರಿ ಜಲಮೂಲಕ್ಕೆ ಧಕ್ಕೆ ಉಂಟಾ­ಗಲಿದೆ ಎಂದು ಆರೋಪಿಸಿ­ದರು.

ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಮಾತನಾಡಿ, ವಿವಿಧ ಯೋಜನೆ­­ಗಳ ಹೆಸರಿನಲ್ಲಿ ಕೊಡಗಿನ ಪರಿಸರ­ವನ್ನು ನಾಶ ಮಾಡಲು ಸರ್ಕಾರ ಹೊರಟಿದೆ. ಜನರು ಒಗ್ಗಟ್ಟಾಗಿ ಹೋರಾಟ ಮಾಡಲು ಮುಂದೆ ಬರಬೇಕು ಎಂದರು.
ಈ ಹೋರಾಟವನ್ನು ಹತ್ತಿಕ್ಕುವ ಉದ್ದೇಶ­ದಿಂದ ನಮ್ಮ ಮೇಲೆ ವಿನಾಕಾರಣ ಮೊಕದ್ದಮೆ ದಾಖಲಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡು­ತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.